



ಡೈಲಿ ವಾರ್ತೆ: 08/JUNE/2025


ತ್ರಾಸಿ ಸಮುದ್ರದಲ್ಲಿ ಕೊಚ್ಚಿ ಹೋದ ಐವರು ಪ್ರವಾಸಿಗರು – ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಅಂಬುಲೆನ್ಸ್ ಚಾಲಕ ಅವರಿಂದ ರಕ್ಷಣೆ!

ಕುಂದಾಪುರ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬವೊಂದು ತ್ರಾಸಿ ಸಮುದ್ರ ಬೀಚ್ ನಲ್ಲಿ ಮೋಜು ಮಸ್ತಿಗೆ ಇಳಿದು ಸಮುದ್ರದ ಅಬ್ಬರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಐವರನ್ನು ಲೈಫ್ ಗಾರ್ಡ್ ಹಾಗೂ ಆಂಬುಲೆನ್ಸ್ ಚಾಲಕ, ಮತ್ತು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.

ಶನಿವಾರ ಸಂಜೆ ವೀಕೆಂಡ್ ಆಗಿರುವುದರಿಂದ ತ್ರಾಸಿ ಬೀಚಿಗೆ ಪ್ರವಾಸಕ್ಕೆಂದು ಬಂದ ಬೆಂಗಳೂರಿನ ವಿದ್ಯಾರಣ್ಯಪುರದ
ಮೂಲದ ಒಂದೇ ಕುಟುಂಬದವರು ಮೋಜು ಮಸ್ತಿ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಆದರೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ಆಪದ್ಬಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ತಿಳಿಸಿದ್ದಾರೆ.