ಡೈಲಿ ವಾರ್ತೆ: 13/JUNE/2025

ಕರ್ನಾಟಕ ಮುಸ್ಲಿಂ ಜಮಾತ್ ಹೊನ್ನಾಳ ಯುನಿಟ್ ಸಾರಥ್ಯದಲ್ಲಿ ವಿದ್ಯಾರ್ಥಿಗಳಿಗೆ 20ನೇ ವರ್ಷದ ಉಚಿತ ನೋಟ್ ಬುಕ್ ವಿತರಣೆ

ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾತ್ ಹೊನ್ನಾಳ ಯುನಿಟ್ ಸಾರಥ್ಯದಲ್ಲಿ – ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಹೊನ್ನಾಳ ಶಾಖೆಯ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 20ನೇ ವರ್ಷದ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವು ಜೂ. 14 ರಂದು ಶನಿವಾರ ಮಧ್ಯಾಹ್ನ 02.30 ಗಂಟೆಗೆ ಸರಿಯಾಗಿ ಉರ್ದು ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ವಕೀಲರು ಸಾಮಾಜಿಕ ಕಾರ್ಯಕರ್ತರು ಆದಂತಹ ಅಡ್ವಕೇಟ್ ಹಂಝತ್ ಉಡುಪಿ ಹಾಗೂ ಈ ದಿನ.com ಇದರ ವರದಿಗಾರರಾದಂತಹ ಶಾರುಕ್ ತೀರ್ಥಹಳ್ಳಿ ಇವರು ಆಗಮಿಸಲಿದ್ದಾರೆ.
ಹಾಗೂ ಶಾಲೆಯ ಬಗ್ಗೆ ಡಾಕ್ಯೂಮೆಂಟರಿ ಮಾಡಿ ಬೈಟ್ಸ್ ಪಡೆದುಕೊಳ್ಳಲಿದ್ದಾರೆ. ಆದ್ದರಿಂದ ಈ ಒಂದು ಕಾರ್ಯಕ್ರಮಕ್ಕೆ ಶಾಲಾ ಹಳೆ ವಿದ್ಯಾರ್ಥಿಗಳು ಶಾಲಾ ಹಿತೈಷಿಗಳು ಶಾಲೆಯ ಮಕ್ಕಳ ಪೋಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.