ಡೈಲಿ ವಾರ್ತೆ: 15/JUNE/2025

ಸಾಲಿಗ್ರಾಮ| ಕಾರ್ಕಡ ಬಡಾಹೋಳಿ ರಾಜಕಾಲುವೆ ಸ್ವಚ್ಛತಾ ಕಾರ್ಯ

ಸಾಲಿಗ್ರಾಮ: ಪಟ್ಟಣ ಪಂಚಾಯತನ ಕಾರ್ಕಡ ಬಡಾಹೋಳಿ ರಾಜಕಾಲುವೆ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.

ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ 12 ಅಡಿ ಇರುವ ಕಾಲುವೆಯಲ್ಲಿ ಸಾಲಿಗ್ರಾಮ ಪೇಟೆಯ ನೀರು ಸೇರಿದಂತೆ ಚೇಂಪಿ ಬೈಲ್ ನೀರು ಕೂಡ ಇದರ ಮೂಲಕ ಮಡಿಸಾಲು ಹೊಳೆಯಿಂದ ಕಾವಡಿ ಹೊಳೆ ಸೇರುತ್ತದೆ. ರಾಜಕಾಲುವೆ ಸ್ವಚ್ಛ ಗೊಳಿಸದ ಕಾರಣ ಚಿತ್ರಪಾಡಿ ಮತ್ತು ಕಾರ್ಕಡದ ನೂರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿ ಕೃಷಿ ಕಾರ್ಯಕ್ಕೆ ಸಮಸ್ಯೆಯಾಗಿತ್ತು. ಸುಮಾರು 5 ಅಡಿ ನೀರಿನಲ್ಲಿ ನಿಂತು ಸ್ಥಳೀಯರು ಸ್ವಚ್ಛಗೊಳಿಸಿದರು. ಕೇವಲ 500 ಮೀಟರ್ ಮಾತ್ರ ಸಾಧ್ಯವಾಗಿದ್ದು ಪ್ರತಿ ಭಾನುವಾರ ಸ್ವಚ್ಛಗೊಳಿಸಲು ತೀರ್ಮಾನಿಸಲಾಯಿತು.

ರಮೇಶ್ ಮೆಂಡನ್, ಕ್ರಷ್ಣ ಕಾರ್ಕಡ, ಕೆ. ಬಿ ಅಣ್ಣಯ್ಯ, ಮಂಜು ದೇಶಿಕೆರೆ, ಸುರೇಶ್ ಮೆಂಡನ್,ಚಂದ್ರ ಬಡಾಹೋಳಿ, ಕೇಶವ ನೈರಿ, ಉಮೇಶ್ ಹೆಬ್ಬಾರ್, ಶೇಖರ್ ಮಾಸ್ಟರ್, ರಾಘವೇಂದ್ರ ಮೆಂಡನ್ ಸಹಕರಿಸಿದರು.