



ಡೈಲಿ ವಾರ್ತೆ: 22/JUNE/2025


SYS ಘಟಕ ಹೆಮ್ಮಾಡಿ ವತಿಯಿಂದ ಸಿರಾಜುಲ್ ಉಲೂಮ್ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಕುಂದಾಪುರ: SYS ಹೆಮ್ಮಾಡಿ ವತಿಯಿಂದ ಸಿರಾಜುಲ್ ಉಲೂಮ್ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಜೂ. 22 ರಂದು ಭಾನುವಾರ ಬೆಳಿಗ್ಗೆ ಹೆಮ್ಮಾಡಿ ಮದರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರೆಹ್ಮನಿಯ ಜುಮಾ ಮಸೀದಿ ಹೆಮ್ಮಾಡಿ ಇದರ ಖತಿಬರಾದ ಮಸೂದ್ ಹಸನಿ ಹೆಮ್ಮಾಡಿ ಇವರು ದುವಾ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮಾಡಿ ಜುಮಾ ಮಸೀದಿಯ ಅಧ್ಯಕ್ಷರಾದ ಎಚ್. ಎ. ಹಂಝ ಅವರು ವಹಿಸಿದ್ದರು.

SYS ಹೆಮ್ಮಾಡಿ ಘಟಕ ಇದರ ವತಿಯಿಂದ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಯಿತು.


ಈ ಸಂದರ್ಭದಲ್ಲಿ ರೆಹ್ಮನಿಯ ಜುಮಾ ಮಸೀದಿ ಹೆಮ್ಮಾಡಿ ಇದರ ಉಪ ಖತಿಬರಾದ ಶರೀಫ್ ಸಹದಿ,
ರೆಹ್ಮನಿಯ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಚ್. ಆರ್. ಅಬ್ದುಲ್ ರಹಿಮಾನ್, SYS ಹೆಮ್ಮಾಡಿ ಘಟಕದ ಅಧ್ಯಕ್ಷರಾದ ರಫೀಕ್ ಹೆಮ್ಮಾಡಿ, S.Y.S. ಕುಂದಾಪುರ ಜೋನ್ ಅಧ್ಯಕ್ಷ ಅಷ್ಫಾಕ್ ಕೋಡಿ,
SYS ಇದರ ಪ್ರಧಾನ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, SYS ಕುಂದಾಪುರ ಜೋನ್ ಇದರ ಕೋಶಾಧಿಕಾರಿ ಆಯುಬ್ ಮಾಣಿಕ್ಕೊಳ್. ಹಾಗೂ SSF. ಬೈಂದೂರು ಡಿವಿಜನ್ ಅಧ್ಯಕ್ಷರಾದ ಎಚ್. ಆರ್. ಸಿರಾಜ್, SSF ಹೆಮ್ಮಾಡಿ ಘಟಕ ಸದಸ್ಯರಾದ ಶಾಹಿಲ್ ಹೆಮ್ಮಾಡಿ, ಎಸ್ ಬಿ ಎಸ್ ಅಧ್ಯಕ್ಷ ಶಿಹಾಬ್ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಚ್. ಎ. ಕರೀಮ್ ಹೆಮ್ಮಾಡಿ ಸ್ವಾಗತಿಸಿ ವಂದಿಸಿದರು.