ಡೈಲಿ ವಾರ್ತೆ: 23/JUNE/2025

ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ಕೋಡಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ

ಕೋಟ: ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ
ಭಾರತೀಯ ಜನತಾ ಪಾರ್ಟಿ, ಕೋಡಿ ಶಕ್ತಿ ಕೇಂದ್ರದ ವತಿಯಿಂದ ಕೋಡಿ ಗ್ರಾಮ ಪಂಚಾಯತ್ ಎದುರು ಜೂ. 23 ರಂದು ಸೋಮವಾರ ಬೆಳಿಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಖಾರ್ವಿ, ಉಪಾಧ್ಯಕ್ಷರಾದ ಪ್ರಸಾದ್ ತಿಂಗಳಾಯ, ಸದಸ್ಯರಾದ ಪ್ರಭಾಕರ ಮೆಂಡನ್, ಕೃಷ್ಣ ಪೂಜಾರಿ, ಸತೀಶ್ ಕುಂದರ್ ಹಾಗೂ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಕುಂದರ್, ಕಾರ್ಯದರ್ಶಿ ಸುಧೀರ್ ಕುಂದರ್ ಮುಖಂಡರಾದ ನಾಗರಾಜ ಕುಂದರ್ ಬೆಂಗ್ರೆ, ರಾಘವೇಂದ್ರ ಸುವರ್ಣ, ಅಣ್ಣಪ್ಪ ಕುಂದರ್, ಸಂದೀಪ್ ಕುಂದರ್, ಸುದಿನ ಕೋಡಿ, ಸದಾನಂದ ಕುಂದರ್ ಹಾಗೂ ನೂರಕ್ಕೂ ಮಿಕ್ಕಿ ಫಲಾನುಭವಿಗಳೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್ ಇವರಿಗೆ ಮನವಿ ನೀಡಲಾಯಿತು.