ಡೈಲಿ ವಾರ್ತೆ: 30/JUNE/2025

ಕೋಮು ಗಲಭೆ ಎಬ್ಬಿಸಲೇ ಬೇಕು ಎಂದು ಜಿದ್ದಿಗೆ ಬಿದ್ದಿರುವವರಿಂದ ಗೋವಿನ ರುಂಡದ ಬಳಕೆ!

ಬ್ರಹ್ಮಾವರ: ಅದೆಷ್ಟೋ ಯತ್ನಿಸಿದರೂ ಶಾಂತವಾಗಿರುವ ಜಿಲ್ಲೆಯಲ್ಲಿ ಕೋಮು ಸಂಘರ್ಷವನ್ನು ಎಬ್ಬಿಸಲು ಸಾಧ್ಯವಾಗದೆ ಹತಾಶೆಗೊಂಡಿರುವ ಕೋಮು ಕ್ರಿಮಿಗಳಿಂದ ಗೋವಿನ ರುಂಡ ಬಳಕೆ ಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ನಾಗೇಂದ್ರ ಪುತ್ರನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕುಂಜಾಲಿ ನಲ್ಲಿ ನಡೆದಿರುವ ಘಟನೆ ಹೃದಯ ವಿದ್ರಾವಕ ಹಾಗೂ ಇಡೀ ಹಿಂದೂ ಧರ್ಮಕ್ಕೆ ಅಪಮಾನಗೊಳಿಸುವ ನೀಚ ಕೃತ್ಯವಾಗಿದೆ.
ದನದ ರುಂಡ ವನ್ನು ತಂದು ಕುಂಜಾಲಿನಲ್ಲಿ ಹಾಕಿರುವುದು ಸಹಿಸಿ ಕೊಳ್ಳಲು ಸಾಧ್ಯ ಇಲ್ಲ, ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶ ದಿಂದಲೇ ಈ ಪಾಪಿ ಕೃತ್ಯ ನಡೆದಿದೆ. ಇದು ಒಬ್ಬ ಸಾಮಾನ್ಯ ಮನುಷ್ಯ ಮಾಡಿರಲು ಸಾಧ್ಯವೇ ಇಲ್ಲಾ, ಧರ್ಮದ ಮಹಾನ್ ರಕ್ಷಕ ರಂತೆ ಕೋಮು ಗಲಭೆಗಳನ್ನು ಎಬ್ಬಿಸುವ ಮೂಲಕವೇ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವಿಗಳಾಗಿ ಬೆಳೆದಿರುವ ಧರ್ಮ ಭ್ರಷ್ಟರ ಕುಮ್ಮಕ್ಕಿನಿಂದಲೇ ಈ ಕೃತ್ಯ ಜರಗಿದೆ.
ಈ ಪ್ರಕರಣ ವನ್ನು ವಿಶೇಷ ಮುತುವರ್ಜಿ ವಹಿಸಿ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕು, ಇಂತಹ ನೀಚ ಕೃತ್ಯ ಮಾಡಿರುವವರ ಮತ್ತು ಮಾಡಿಸಿರುವವರ ವಿರುದ್ಧ ಯಾವುದೇ ಪ್ರಭಾವ, ಅಂತಸ್ತುಗಳಿಗೆ ಮಣಿಯದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಕೋಮು ಸಂಘರ್ಷ ಎಬ್ಬಿಸುವುದರ ಮೂಲಕವೇ ರಾಜಕಾರಣದ ಆಯಕಟ್ಟಿನ ಜಾಗದಲ್ಲಿ ಕುಂತಿರುವವರು ಇದೀಗ “ಕೋಮು ನಿಗ್ರಹ ಪಡೆ” ಉಡುಪಿ ಜಿಲ್ಲೆಯಲ್ಲಿ ಆಗ ಬಾರದು ಎಂದು ಬೊಬ್ಬಿರಿಯುತ್ತಿರುವುದು ಹಾಸ್ಯಸ್ಪದವಾಗಿದೆ. ಒಂದು ವೇಳೆ ಜಿಲ್ಲೆಯಲ್ಲಿ ಕೋಮು ಗಲಭೆಯಿಲ್ಲದಿರುತ್ತಿದ್ರೆ ಇದೀಗ ತಾನು ಗಳಿಸಿರುವ ಸ್ಥಾನವನ್ನು ಗಳಿಸಲು ಸಾಧ್ಯವಿತ್ತೆ ಎನ್ನುವುದನ್ನು ಕೋಮು ಕ್ರಿಮಿಗಳು ಅರ್ಥಮಾಡಿ ಕೊಳ್ಳಬೇಕು. ಕೇವಲ ತನ್ನ ಸ್ವಾರ್ಥಕ್ಕಾಗಿ ಇಡೀ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳೊಂದಿಗೆಆಟವಾಡುವ ಇಂತಹ ಗೋಮುಖ ವ್ಯಾಘ್ರರ ಬಣ್ಣ ಬಯಲಾಗುವ ದಿನಗಳು ದೂರವಿಲ್ಲ ಈ ಪ್ರಕರಣವನ್ನು ಪೊಲೀಸ್ ಇಲಾಖೆ ವಿಶೇಷ ವಾಗಿ ಪರಿಗಣಿಸಿ ನೀಚರನ್ನು ಸಲಾಕೆಗಳ ಹಿಂದೆ ತಳ್ಳಿ ಸಮಾಜದ ಸ್ವಾಸ್ಥ ವನ್ನು ಕಾಪಾಡಬೇಕು ಹಾಗೂ ಮುಂದೆ ಇಂತಹ ಕೃತ್ಯ ಗಳನ್ನು ನಡೆಸುವ ಮುನ್ನ ನೀಚರು ಸಾವಿರ ಬಾರಿ ಯೋಚಿಸುವಂತಾಗಬೇಕೆಂದು ನಾಗೇಂದ್ರ ಅವರು ಅಗ್ರಹಿಸಿದ್ದಾರೆ.


ಈ ಪ್ರಕರಣ ವನ್ನು ಯಾರದ್ದೋ ತಲೆಗೆ ಕಟ್ಟಿ ಆ ಮೂಲಕ ಕಾಂಗ್ರೆಸ್ ನ್ನು ಹಣಿಯುವ ಷಡ್ಯಂತ್ರ ಇಂತಹ ಮಾನಸಿಕ ಅಸ್ವಸ್ಥರಿಂದ ಎಗ್ಗಿಲ್ಲದೇ ನಡೆಯುತ್ತಿದೆ. ಹಿಂದೂ ಸಮಾಜ ಪಕ್ಷತೀತವಾಗಿ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.