ಡೈಲಿ ವಾರ್ತೆ: 30/JUNE/2025

ಕುಂಜಾಲಿನಲ್ಲಿ ದನದ ರುಂಡ ಪತ್ತೆ ಪ್ರಕರಣ: ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕೋಮುಸೌಹಾರ್ದ ಯನ್ನು ಕಾಪಾಡಿದ ಉಡುಪಿ ಜಿಲ್ಲಾ ಎಸ್ಪಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಅಭಿನಂದನೆಗಳು – ಉಡುಪಿ ಜಿಲ್ಲಾ ಮುಸ್ಲಿಂ ಜಮಾತ್

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕುಂಜಾಲಿನಲ್ಲಿ ಎರಡು ದಿನಗಳ ಹಿಂದೆ ರಸ್ತೆಯ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ದನದ ರುಂಡಾದ ವಿಷಯವು ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸುವ ಎಲ್ಲಾ ಲಕ್ಷಣಗಳಿರುವಾಗ ಉಡುಪಿ ಜಿಲ್ಲಾ ನೂತನ ಎಸ್ ಪಿ ಮತ್ತು ಪೊಲೀಸ್ ಇಲಾಖೆ ಶೀಘ್ರಗತಿಯಲ್ಲಿ ತನಿಖೆಯನ್ನು ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ. ಸಮಾಜದಲ್ಲಿ ಕೋಮು ದ್ವೇಷ ಹರಡದಂತೆ ಎಲ್ಲಾ ವ್ಯವಸ್ಥೆಗಳನ್ನು ಪೊಲೀಸ್ ಇಲಾಖೆ ಮಾಡಿತ್ತು ಪ್ರತ್ಯೇಕವಾಗಿ ಬ್ರಹ್ಮಾವರ ಪೊಲೀಸರು ಸಹ ಈ ಒಂದು ವಿಷಯದಲ್ಲಿ ತುಂಬಾ ಚುರುಕಿನಿಂದ ಕಾರ್ಯಾಚರಣೆಯನ್ನು ಮಾಡಿದ್ದರು. ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಪೋಲಿಸ್ ಇಲಾಖೆಗೆ ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ಅಭಿನಂದನೆಗಳನ್ನು ಸಲ್ಲಿಸಿದೆ.


ಅದೇ ರೀತಿ ಸಮಾಜದಲ್ಲಿ ಭಿನ್ನತೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದ ರಾಜಕೀಯ ಪಕ್ಷ ಮತ್ತು ಗೌರವ ಸ್ಥಾನದಲ್ಲಿರುವ ಶಾಸಕರು ಇನ್ನಾದರೂ ಸಮಾಜವನ್ನು ಒಡೆಯುವ ಕೆಲಸ ಮಾಡದೆ ಯಾವುದೇ ಘಟನೆಗ ಸಂಭವಿಸಿದಾಗ ಅದರ ಬಗ್ಗೆ ಪೂರ್ವಪರ ಯೋಚಿಸದೆ ಮುಸ್ಲಿಮರ ಬಗ್ಗೆ ಅಪಪ್ರಚಾರ ಮಾಡುವುದು, ಹಾಗೂ ಇಲ್ಲಸಲ್ಲದ ಅಪವಾದವನ್ನು ಮಾಡುವುದು ಬಿಟ್ಟು ಸಮಾಜದ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕಾಗಿ ಕೇಳಿಕೊಳ್ಳುತ್ತಾ ಇದೆ.
ಆರೋಪಿಗಳ ಧರ್ಮ ಯಾವುದೇ ಇರಲಿ ಆರೋಪಿಗಳು ಕೇವಲ ಆರೋಪಿಗಳಾಗಿದ್ದು ಆ ಆರೋಪದ ಕಾರಣವಾಗಿ ಅವರ ಧರ್ಮವನ್ನು ನಿಂದಿಸುವುದನ್ನು ಬಿಟ್ಟುಬಿಡಬೇಕಾಗಿದೆ. ಆರೋಪಿಗಳ ಧರ್ಮವನ್ನು ನೋಡದೆ ಅವರಿಗೆ ಕಠಿಣವಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಇಂತಹ ಕೃತ್ಯವನ್ನು ಮಾಡಿದಂತಹ ಅಪರಾಧಿಗಳಿಗೆ ಯಾವುದೇ ಕಾನೂನು ನೆರವನ್ನು ನೀಡದೆ ಅವರನ್ನು ಕಾನೂನಿನ ಕುಣಿಕೆಯಿಂದ ಉಳಿಸುವ ಯಾವುದೇ ಪ್ರಯತ್ನವನ್ನು ಮಾಡಬಾರದು.
ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡಿಕೊಳ್ಳಲು ಎಲ್ಲಾ ಸಮುದಾಯದ ಜನರು ಸಹಕರಿಸಬೇಕು ಎಂದು ಜಿಲ್ಲಾ ಮುಸ್ಲಿಂ ಜಮಾತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ರೀತಿ ಕುಂಜಾಲಿನ ಮುಸ್ಲಿಮರು ಮತ್ತು ಹಿಂದುಗಳು ಯಾವುದೇ ರೀತಿಯ ರಾಜಕೀಯ ಪಿತೂರಿಗೆ ಒಳಗಾಗದೆ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿದ್ದಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಜಮಾ ಅತ್ತಿನ ಅಧ್ಯಕ್ಷರಾದ ಬಿಎಸ್ಎಫ್ ಮಹಮ್ಮದ್ ರಫೀಕ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್ ಸುಬಾನ್ ಅಹಮದ್ ಹೊನ್ನಾಳ ಕುಂಜಾಲಿನ ಸರ್ವ ಜನತೆಗೆ ಶುಭವನ್ನು ಹಾರೈಸಿದ್ದಾರೆ.