



ಡೈಲಿ ವಾರ್ತೆ: 05/ಅ./2025

ಉಡುಪಿ| ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ- ಮೂವರು ಶಿಕ್ಷಕಿಯರ ಅಮಾನತು

ಉಡುಪಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಕುರಿತು ಆದೇಶ ಸ್ವೀಕರಿಸದೆ ನಿರ್ಲಕ್ಷಿಸಿದ್ದ ಉಡುಪಿ ಜೆಲ್ಲೆಯ ಮೂರುವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಒಳಕಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿಯರಾದ ಸುರೇಖ, ರತ್ನಾ, ಉದ್ಯಾವರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ಸಹಶಿಕ್ಷಕಿ ಪ್ರಭಾ ಬಿ.
ಈ ಮೂವರು ಶಿಕ್ಷಕಿಯರು ಅಮಾನತುಗೊಂಡವರು. ಆದೇಶ ಪ್ರತಿ ಸ್ವೀಕರಿಸಲು ಹಲವು ಬಾರಿ ಸಂಪರ್ಕಿಸಿದರೂ ನಿರ್ಲಕ್ಷಿಸಿದರು ಮಾತ್ರವಲ್ಲದೆ ನೋಟಿಸ್ಗೂ ಸಮಜಾಯಿಷಿ ನೀಡಿದ ಕಾರಣ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.