ಡೈಲಿ ವಾರ್ತೆ : 01 ಮೇ 2022

✒️ಓಂಕಾರ ಎಸ್. ವಿ. ತಾಳಗುಪ್ಪ

ಬೆಂಗಳೂರು : ಕೆ. ಜಿ. ಎಫ್. ಚಲನಚಿತ್ರ ಖ್ಯಾತಿಯ ರಾಕಿಂಗ್ ಸ್ಟಾರ್ ಎಂದೇ ಜನಪ್ರಿಯ ಚಲನಚಿತ್ರ ನಟ ಯಶ್ ರವರು ಸಮಾಜಸೇವೆಯಲ್ಲಿ ತನ್ನದೇ ಆದ ಒಂದಿಲ್ಲೊಂದು ಸುದ್ದಿಯಲ್ಲಿರುವ ಯಶ್ ಈಗ ಮತ್ತೊಂದು ಸಮಾಜದ ಒಳಿತಿಗಾಗಿ ಕೋಟ್ಯಂತರ ಆದಾಯ ಮೂಲವನ್ನೇ ತಿರಸ್ಕರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ರಾಕಿಂಗ್ ಸ್ಟಾರ್ ಯಶ್ ರವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಪಾನ್ ಮಸಾಲಾ ಕಂಪನಿಯು ಜಾಹಿರಾತು ನೀಡಲು ಚಲನಚಿತ್ರ ನಟ ರಾಕಿಂಗ್ ಸ್ಟಾರ್ ರವರಿಗೆ ಕೋಟ್ಯಂತರ ರೂಪಾಯಿ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ, ಈಗಿನ ಕಾಲಮಾನದಲ್ಲಿ ಯುವಕರು ಪಾನ್ ಮಸಾಲಾ ದುಶ್ಚಟಗಳಲ್ಲಿ ತಮ್ಮ ಅರೋಗ್ಯದಿಂದ ಬಲಿಪಶುಗಳಾಗಿದ್ದು ಅಲ್ಲದೇ ಭೀಕರ ನರಕಯಾತನೆಯಿಂದ ಹಲವರು ಬಳಲುತ್ತಿರುವುದರಿಂದ ಸಮಾಜಕ್ಕೆ ಮಾರಕವಾಗಿರುವ ಈ ಪಾನ್ ಮಸಾಲಾ ಕಂಪನಿಗಳಿಗೆ ಜಾಹಿರಾತು ನೀಡಲು ನಿರಾಕರಿಸಿದ್ದಾರೆ.