ಡೈಲಿ ವಾರ್ತೆ: 05/ಮೇ /2024

ಮೇ. 10, 11, ಹಾಗೂ 12 ರಂದು ಕಳಿಬೈಲ್ ನೇಮೋತ್ಸವ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೆಳಬೆಟ್ಟು ಮೂಡಹಡು ಗ್ರಾಮದ ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದ ಕಳಿಬೈಲ್ ನೇಮೋತ್ಸವ, ಗೆಂಡೋತ್ಸವ ಹಾಗೂ ಮಾರಿಪೂಜೆಯು ಮೇ. 10, 11 ಹಾಗೂ 12 ರಂದು ನಡೆಯಲಿದೆ.

ದಿನಾಂಕ 10/05/2024 ರಂದು ಬೆಳಿಗ್ಗೆ 6 ರಿಂದ ಶ್ರೀ ವೇದ ಮೂರ್ತಿ ನಾಯಿರಬೆಟ್ಟು ಶ್ರೀ ರಮೇಶ್ ಭಟ್ ಇವರ ನೇತೃತ್ವದಲ್ಲಿ ಶ್ರೀ ತುಳಸಿ ಅಮ್ಮನ ಶಿಲಾಮಯ ಬಿಂಬ ಪ್ರತಿಷ್ಠೆ.
“ಧಾರ್ಮಿಕ ಪೂಜಾ ಕಾರ್ಯಕ್ರಮ”
ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ನಂತರ “ಅನ್ನಸಂತರ್ಪಣೆ “
ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ “ಅನ್ನಪೂರ್ಣ ಪಾಕಶಾಲೆ ಲೋಕಾರ್ಪಣೆ”
ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ
ರಾತ್ರಿ 8:30 ಕ್ಕೆ ಭಕ್ತಿ ಗಾನ ನೃತ್ಯ ವೈಭವ
ರಾತ್ರಿ 9:30 ಕ್ಕೆ ಶಿರಸಿ ಅಮ್ಮನ ದರ್ಶನ ಸೇವೆ “ಗೆಂಡೋತ್ಸವ”

ದಿನಾಂಕ 11/05/2024 ರಂದು ಬೆಳಿಗ್ಗೆ 6 ಗಂಟೆಗೆ ಪ್ರಸನ್ನ ಪೂಜೆ
ಬೆಳಿಗ್ಗೆ 10:00 ಗಂಟೆಗೆ ನೇಮೋತ್ಸವದ ಚಪ್ಪರ ಮೂರ್ತ
ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನ ಪೂಜೆ
ಮಧ್ಯಾಹ್ನ 1 ರಿಂದ ಮಹಾ ಅನ್ನಸಂತರ್ಪಣೆ
ಸಂಜೆ 3:30 ಕ್ಕೆ ಭಂಡಾರ ಇಳಿಯುವುದು
ಸಂಜೆ 6 ಗಂಟೆ ಯಿಂದ “ಕಳಿಬೈಲ್ ನೇಮೋತ್ಸವ
( ಯಕ್ಷಿ ಕೋಲ ಸೇವೆ, ಪಂಜುರ್ಲಿ/ಗುರಮ್ಮ ಕೋಲ ಸೇವೆ, ಮಲಸಾವರಿ ಆಕಾಶ ರಾಹು ಕೋಲ ಸೇವೆ ಕಳಿಬೈಲ್ ಕೊರಗಜ್ಜ ಕೋಲ ಸೇವೆ)

ದಿನಾಂಕ 12/05/2024 ರಂದು
ಬೆಳಿಗ್ಗೆ 10 ಗಂಟೆಗೆ ಪಂಜುರ್ಲಿ ದೈವದ ದರ್ಶನ ಸೇವೆ “ದೈವದ ಪೂಜೆ”
ಮಧ್ಯಾಹ್ನ 2 ಗಂಟೆಗೆ ತುಳಸಿ ಅಮ್ಮನ ದರ್ಶನ ಸೇವೆ,
ಶ್ರೀ ಮಳಯಾಳಿ ಭಂಗಿ ಅಜ್ಜನ ದರ್ಶನ ಸೇವೆ, ಹುಲಿದುರ್ಗಿ ಅಮ್ಮನ ದರ್ಶನ ಸೇವೆ
ಸಂಜೆ 4 ರಿಂದ “ಶಿರಸಿ ಮಾರಿಕಾಂಬೆ” ದರ್ಶನ ಸೇವೆ
“ಮಾರಿ ಪೂಜೆ”
ರಾತ್ರಿ 8 ಕ್ಕೆ “ಸ್ವಾಮೀ ಕೊರಗಜ್ಜನ”  ದರ್ಶನ ಸೇವೆ
ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಕಳಿಬೈಲು ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರು ಹಾಗೂ ಸಂಚಾಲಕರಾದ ಶ್ರೀ ಅಭಿಜಿತ್ ಪಾಂಡೇಶ್ವರ ಹಾಗೂ ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮತ್ತು ಶ್ರೀ ಕ್ಷೇತ್ರ ಕಳಿಬೈಲು ಆಡಳಿತ ಮೊಕ್ತೇಸರರು ಶ್ರೀ ಎಂ.ಸಿ. ಚಂದ್ರಶೇಖರ್ ಪ್ರಕಟಿಸಿರುತ್ತಾರೆ.