ಡೈಲಿ ವಾರ್ತೆ : 29 ಜೂನ್ 2022

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ನೂಗಲಬಂಡೆಯ ದಡದಲ್ಲಿ 8 ತಿಂಗಳ ಮಗುವನ್ನು ಕೆರೆಯ ದಡದಲ್ಲಿ ನಿಲ್ಲಿಸಿ, ತಾಯಿ ಕೆರೆಯಲ್ಲಿ ಮುಳುಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪರಿಮಳ ಎಂಬ ಮಹಿಳೆಯೂ, 8 ತಿಂಗಳ ಮಗಳಾದ ಚರಿತ್ರಾಳನ್ನು ದಡದಲ್ಲೇ ನಿಲ್ಲಿಸಿ ಕೆರೆಗೆ ಇಳಿದಿದ್ದಾಳೆ. ತಾಯಿ ನೀರಿನಲ್ಲಿ ಮುಳುಗುವುದನ್ನು ನೋಡಿದ 8 ತಿಂಗಳ ಮಗು ತಾಯಿ ಹುಡುಕಿಕೊಂಡು ನೀರಿಗೆ ಇಳಿದಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಿದ್ದಾರೆ.

ಮಹಿಳೆಯ ಪತಿ ಮದ್ಯವ್ಯಸನಿಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.