ಹೊನ್ನಾವರ: ಮೂಡಬಿದ್ರೆಯಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ.

ಹೊನ್ನಾವರ ಮೂಡಗಣಪತಿ ಕರಾಟೆ ಪಟುಗಳಾದ ಋತ್ವಿಕ್ ಮೇಸ್ತ, ಬೆಳ್ಳಿ ಹಾಗೂ ಕಂಚು ಪದಕ, ಭರತ್ ನಾಯ್ಕ, ಅನಿರುದ್ಧ್, ದ್ರುವ ಎನ್ನುವವರು ತಲಾ ಎರಡು ಕಂಚಿನ ಪದಕ ಪಡೇಯುವ ಮೂಲಕ ಸಾಧನೆ ಮಾಡಿದ್ದಾರೆ. ಇವರಿಗೆ ಪ್ರಭಾಕರ್ ಗೌಡ ತರಬೇತಿ ನೀಡಿದ್ದು, ಕ್ರೀಡಾ ಪಟುಗಳ ಸಾಧನೆಗೆ ತಾಲೂಕಿನೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ವರದಿ-ಸುಚಿತ್ರಾ ನಾಯ್ಕ ಹೊನ್ನಾವರ