ಡೈಲಿ ವಾರ್ತೆ: 31 ಅಕ್ಟೋಬರ್ 2022




ವರದಿ : ವಿದ್ಯಾಧರ ಮೊರಬಾ ಅಂಕೋಲಾ

ಅಂಕೋಲಾ: ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರಿಂದ ಸ್ವಾಗತ

ಅಂಕೋಲಾ : ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರು ಸ್ವಾಗತಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಪ್ರತಿಯೊಂದು ವಿಚಾರವನ್ನು ಚರ್ಚಿಸೋಣ. ಅಭಿವೃದ್ಧಿಯ ವಿಚಾರ ದಲ್ಲಿ ಎಲ್ಲರೂ ಸ್ಪಂದಿಸೋಣ. ತಾಲೂಕಿನಲ್ಲಿ ಯಾವುದೇ
ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತರವ ಮೂಲಕ ಸಂಬಂಧಪಟ್ಟ
ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕುಮಟಾ ಎಸಿ ರಾಘವೇಂದ್ರ ಜಗಳಾಸರ್, ತಹಸೀಲ್ದಾರ್ ಉದಯ ಕುಂಬಾರ, ಪತ್ರ ಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಕಾರ್ಯದರ್ಶಿ ವಿದ್ಯಾಧರ ಮೊರಬಾ, ಪತ್ರಕರ್ತರಾದ ಕೆ. ರಮೇಶ, ನಾಗರಾಜ ಮಂಜಗುಣಿ, ಸುಭಾಶ ಕಾರೇಬೈಲ್, ನಾಗರಾಜ ಶೆಟ್ಟಿ, ವಿಲಾಸ ನಾಯಕ ಇತರರು ಉಪಸ್ಥಿತರಿದ್ದರು.