ಡೈಲಿ ವಾರ್ತೆ:18 ಜನವರಿ 2023

ಮುರ್ಡೇಶ್ವರ: ಸಮುದ್ರಪಾಲಾಗಿದ್ದ ಸಾಗರದ ಇಬ್ಬರು ಯುವಕರ ಮೃತದೇಹ ಪತ್ತೆ

ಭಟ್ಕಳ: ಸೋಮವಾರ ಸಂಜೆ ಮುರ್ಡೇಶ್ವರ ಬೀಚ್ ನಲ್ಲಿ ಸಮುದ್ರಪಾಲಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ.

ಸಾಗರ ತಾಲೂಕಿನ ಪುನೀತ್ ಚೌಡಪ್ಪ (30) ಹಾಗೂ ರಾಘವೇಂದ್ರ(17) ಮೃತಪಟ್ಟವರು.

ಪುನೀತ ಮೃತದೇಹವು ಮಂಗಳವಾರ ಪತ್ತೆಯಾಗಿದ್ದರೆ, ರಾಘವೇಂದ್ರರ ಮೃತದೇಹ ಬುಧವಾರ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪುನೀತ, ರಾಘವೇಂದ್ರ ಸೇರಿದಂತೆ ಮೂವರು ಯುವಕರು ಸೋಮವಾರ ಸಂಜೆ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಇಳಿದ ಇಬ್ಬರು ನಾಪತ್ತೆಯಾಗಿದ್ದರು.
ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.