ಡೈಲಿ ವಾರ್ತೆ:25 ಜನವರಿ 2023

ಮಾರ್ಚ್ 7 ರಂದು ಟೀಮ್ ಭವಾಬ್ಧಿ ಪಡುಕೆರೆ ಭವಾಬ್ಧಿ 2023 ಆಮಂತ್ರಣ ಪತ್ರಿಕೆ ಬಿಡುಗಡೆ:
ಮನೋತಜ್ಞ ಡಾ. ಪ್ರಕಾಶ್ ತೋಳಾರ್ ರಿಗೆ ಹುಟ್ಟೂರು ಸನ್ಮಾನ

ಮನೋ ತಜ್ಞ ಡಾ. ಪ್ರಕಾಶ್ ತೋಳಾರ್

ಕೋಟ ಪಡುಕೆರೆಯಲ್ಲಿ ಮಾರ್ಚ್ 7 ರಂದು ಪಡುಕೆರೆ ಟೀಮ್ ಭವಾಬ್ದಿ ವತಿಯಿಂದ ನಡೆಯುವ ಭವಾಬ್ಧಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೋಟ ಮಣೂರಿನ ಗೀತಾನಂದ ಫೌಂಡೇಶನ್ ಪ್ರವರ್ತಕ ಹಾಗೂ ಕೋಟದ ಜನತಾ ಫಿಶ್ ಮಿಲ್ ಆಂಡ್ ಆಯಿಲ್ ಪ್ರಾಡಕ್ಟ್ ನ ಆಡಳಿತ ನಿರ್ದೇಶಕ ಆನಂದ ಸಿ. ಕುಂದರ್ ಬಿಡುಗಡೆಗೊಳಿಸಿ ಅವರು ಮಾತನಾಡಿ ಪಡುಕೆರೆ ಟೀಮ್ ಭವಾಬ್ದಿ ಸಂಘಟನೆಯವರು ಸ್ಥಳೀಯ ಪ್ರತಿಭೆಗಳು ಹಾಗೂ ಹಿರಿಯ ಪ್ರತಿಭಾವಂತರು, ಸಮಾಜಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವಂತ ಕಾರ್ಯ ಶ್ಲಾಘನೀಯವಾದದ್ದು. ಇವರ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಟೀಮ್ ಭವಾಬ್ಧಿ ಪಡುಕೆರೆ ಇದರ ಅಧ್ಯಕ್ಷ ಪ್ರಸಾದ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಾರ್ಚ್ 7 ರಂದು ಕೋಟತಟ್ಟು ಪಡುಕರೆಯಲ್ಲಿ ಬೃಹತ್ ರಕ್ತದಾನ‌ ಶಿಬಿರ, ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಕುಂದಾಪುರದ ಮಾತಾ ಆಸ್ಪತ್ರೆಯ ಡಾ.ಪ್ರಕಾಶ್ ತೋಳಾರ್ ಅವರಿಗೆ ಹುಟ್ಟೂರ ಸನ್ಮಾನ, ಕರಾವಳಿಯ ಕಾಯಕ ದೀವಿಗೆಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘಟಿಕರು ತಿಳಿಸಿದರು.