ಡೈಲಿ ವಾರ್ತೆ: 31 ಜನವರಿ 2023

ಜೈಂಟ್ ವೀಲ್ ಗೆ ತಲೆಕೂದಲು ಸಿಲುಕಿ ಬಾಲಕಿ ಗಂಭೀರ

ಮಂಡ್ಯ : ಬಾಲಕಿಯ ತಲೆಕೂದಲು ಜೈಂಟ್ ವೀಲ್ ಗೆ ಸಿಲುಕಿ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ಶ್ರೀರಂಗನಾಥ ದೇಗುಲದ ಜಾತ್ರೆಯಲ್ಲಿ ನಡೆದಿದೆ.

ಶ್ರೀವಿದ್ಯಾ (14) ಗಾಯಗೊಂಡ ಬಾಲಕಿ ಎಂದು ತಿಳಿದು ಬಂದಿದೆ. ರಥ ಸಪ್ತಮಿ ಹಿನ್ನೆಲೆ ಮಂಡ್ಯದ ಶ್ರೀರಂಗನಾಥ ದೇಗುಲದಲ್ಲಿ ಜಾತ್ರೆಯ ಹಿನ್ನೆಲೆಯಲ್ಲಿ ವಿದ್ಯಾ ಕುಟುಂಬ ಶ್ರೀರಂಗಪಟ್ಟಣಕ್ಕೆ ತೆರಳಿತ್ತು.

ದೇವರ ದರ್ಶನದ ಬಳಿಕ ಆವರಣದಲ್ಲಿ ಜೈಂಟ್ ವೀಲ್ ಆಡಲು ಬಾಲಕಿ ತೆರಳಿದ್ದು, ಈ ವೇಳೆ ಆಕಸ್ಮಿಕವಾಗಿ ಬಾಲಕಿಯ ತಲೆಕೂದಲು ಜೈಂಟ್ ವೀಲ್ ಗೆ ಸಿಲುಕಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎನ್ನಲಾಗಿದೆ.

ಕೂಡಲೇ ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಶ್ರೀವಿದ್ಯಾಳ ಸಂಬಂಧಿ ಪೂಜಾ ಕೊಟ್ಟ ದೂರು ಆಧರಿಸಿ
ಜೈಂಟ್ ವೀಲ್ ಮಾಲೀಕ ರಮೇಶ್, ಶ್ರೀರಂಗನಾಥಸ್ವಾಮಿ ದೇಗುಲದ ಮುಖ್ಯ ಕಾರ್ಯ
ನಿರ್ವಾಹಕ ತಮ್ಮೇಗೌಡ, ಪುರಸಭೆ ಮುಖ್ಯಾಧಿಕಾರಿ
ಸಂದೀಪ್ ವಿರುದ್ಧ
ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.