ಡೈಲಿ ವಾರ್ತೆ: 31 ಜನವರಿ 2023

ಕಂಬಳದಲ್ಲಿ ಪ್ರಿಯತಮೆಯನ್ನು ಭೇಟಿಯಾಗಲು ಬಂದ ಪ್ರಿಯಕರನಿಗೆ ಮಾಜಿ ಪ್ರಿಯಕರನಿಂದ ಹಲ್ಲೆ: ಪ್ರಕರಣ ದಾಖಲು!

ಪುತ್ತೂರು: ಕಂಬಳ ವೀಕ್ಷಣೆಗೆ ಬಂದಿದ್ದ ಮಂಗಳೂರಿನ ಯುವಕ ತನ್ನ ಪ್ರೇಯಸಿಯ ಜೊತೆ ಕಂಬಳ ಗದ್ದೆಯಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಯುವತಿಯ ಮಾಜಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಮಂಗಳೂರಿನ ಯುವಕನಿಗೆ ಬೆದರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರಿನ ಕೋಡಿಕಲ್ ರಸ್ತೆ ಬಾಪೂಜಿ ನಗರದ ಸಾಗರ್ (23) ಮತ್ತು ಆತನ ಸ್ನೇಹಿತ ದುರ್ಗಾಪ್ರಸಾದ್ ಹಲ್ಲೆಗೊಳಗಾದವರು. ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್‌ ಮತ್ತು ಹೇಮಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.