ಡೈಲಿ ವಾರ್ತೆ:15 ಫೆಬ್ರವರಿ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ ನೇವಳ್ಸೆಯಲ್ಲಿ ಟಿಪ್ಪರ್ ಪಲ್ಟಿ : ಸ್ಥಳದಲ್ಲೇ ಚಾಲಕ ಸಾವು !

ಅಂಕೋಲಾ : ಟಿಪ್ಪರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ 5.30 ರ ಸುಮಾರಿಗೆ ತಾಲೂಕಿನ ಗುಂಡಬಾಳ ನೆವಳ್ಸೆ ಹತ್ತಿರ ನಡೆದಿದೆ.

ಕುಮಟಾ ತಾಲೂಕಿನ ದೀವಗಿ ನಿವಾಸಿ ಶ್ರೀಧರ ಎನ್. ದೇಶಭಂಡಾರಿ (44) ಎಂಬಾತನೇ ಸಾವನ್ನಪ್ಪಿದ ಚಾಲಕ. ಈತನು ಅಂಕೋಲಾ ತಾಲೂಕಿನ ನೆವಳ್ಸೆಯಿಂದ ಕುಮಟಾಕ್ಕೆ ಟಿಪ್ಪರ್‍ನಲ್ಲಿ ಚಿರೆಕಲ್ಲು ಸಾಗಿಸುತ್ತಿದ್ದ ವೇಳೆ ಚಾಲನೆಯ ನಿಯಂತ್ರಣ ತಪ್ಪಿ ರಸ್ತೆ ಎಡಕ್ಕೆ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಶಿರಗುಂಜಿಯ ನವೀನ ನಾರಾಯಣ ನಾಯಕ ಇವರಿಗೆ ಸಂಬಂಧಿಸಿದ ಟಿಪ್ಪರ್. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.