ಡೈಲಿ ವಾರ್ತೆ:17 ಫೆಬ್ರವರಿ 2023

ಗೋ ರಕ್ಷಕರಿಂದ ಇಬ್ಬರು ಯುವಕರ ಹತ್ಯೆ; ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಬೆನ್ನಲ್ಲೇ ಕುಟುಂಬದ ಆರೋಪ!

ಹರ್ಯಾಣಾ;ಇಬ್ಬರು ಯುವಕರ ಮೃತದೇಹ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಭಿವಾನಿ ಜಿಲ್ಲೆಯಲ್ಲಿ ನಡೆದಿದೆ.

ನಾಸಿರ್‌ (25) ಹಾಗೂ ಜುನೈದ್ (35) ಮೃತಪಟ್ಟವರು. ರಾಜಸ್ಥಾನದ ಭರತಪುರ್‌ ಜಿಲ್ಲೆಯಿಂದ ಬಜರಂಗದಳದ ಕಾರ್ಯಕರ್ತರು ಅಪಹರಿಸಿದ್ದಾರೆಂದು ಅವರ ಕುಟುಂಬ ಆರೋಪಿಸಿದೆ.

ಮೃತರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ
ಮೋನು ಮನೇಸರ್‌, ಲೋಕೇಶ್‌ ಸಿಂಘಿಯಾ, ರಿಂಕು ಸೈನಿ, ಅನಿಲ್‌ ಮತ್ತು ಶ್ರೀಕಾಂತ್‌ ಮೇಲೆ ಕೇಸ್ ದಾಖಲಾಗಿದೆ.

ಗೋ ಸಾಗಾಟದ ಆರೋಪದಲ್ಲಿ ಅವರನ್ನು ಅಪಹರಿಸಿದ್ದ ಬಜರಂಗದಳದವರು ತೀವ್ರವಾಗಿ ಹಲ್ಲೆ ನಡೆಸಿ ಬೆಂಕಿ ಹಚ್ಚಿದ್ದಾರೆಂದು ಆಪಾದಿಸಲಾಗಿದೆ. ಈ ಕುರಿತು ಸತ್ಯಾಂಶತೆ ತನಿಖೆ ಮೂಲಕ ಹೊರ ಬರಬೇಕಿದೆ.