ಡೈಲಿ ವಾರ್ತೆ:19 ಫೆಬ್ರವರಿ 2023

ಪಾದಯಾತ್ರೆಗೆಂದು ಬಂದಿದ್ದ ಯುವಕ ನಾಪತ್ತೆ: ಆತಂಕದಲ್ಲಿ ಪೋಷಕರು

ಚಿಕ್ಕಮಗಳೂರು: ಪಾದಯಾತ್ರೆಗೆ ಹೊರಟಿದ್ದ ಯುವಕ ನಾಪತ್ತೆಯಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ತಿಮ್ಲಾಪುರ ಗ್ರಾಮದ ಯುವಕ ಲವ (22) ನಾಪತ್ತೆಯಾಗಿರುವ ಯುವಕನಾಗಿದ್ದಾನೆ.

ಯುವಕ ಸ್ವಲ್ಪ ಬುದ್ಧಿಮಾಂದ್ಯನಾಗಿದ್ದು50 ಜನರು ಪಾದ ಯಾತ್ರಿಕರ ಜೊತೆಗೆ ಬಂದಿದ್ದ ಈತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದಾನೆ

ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ತಮ್ಮ ಮಗನನ್ನು ಯಾರಾದರೂ ಕಂಡಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಮನವಿ ಮಾಡಿಕೊಂಡಿದ್ದು, ಮಗನನ್ನು ಪತ್ತೆ ಹಚ್ಚಿಕೊಟ್ಟರೆ 5 ಸಾವಿರ ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ.