ಡೈಲಿ ವಾರ್ತೆ:21 ಫೆಬ್ರವರಿ 2023

ಮಾವಿನಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಹೋಟೆಲಿನೊಳಗೆ ನುಗ್ಗಿದ ಲಾರಿ, ಓರ್ವ ಗಂಭೀರ ಗಾಯ

ಕುಂದಾಪುರ: ಚಾಲಕನ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಲಾರಿಯೊಂದು ಹೋಟೆಲ್ ಗೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮಾವಿನಕಟ್ಟೆ ಕ್ರಾಸ್ ನಲ್ಲಿ ಫೆ. 20 ರಂದು ಸಂಭವಿಸಿದೆ.

ಗಾಯಗೊಂಡವರನ್ನು ಮಾವಿನಕಟ್ಟೆ ನಿವಾಸಿ ಅಬಿದ್ದಿನ್ ಸಾಹೇಬ್ ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಗುಲ್ವಾಡಿ ಕಡೆಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ, ಮಹಮ್ಮದ್ ಹನೀಫ್ ಅವರು ನಡೆಸುತ್ತಿದ್ದ ಫ್ಯಾಮಿಲಿ ಡಾಬಾದೊಳಗೆ ಟಿಪ್ಪರ್ ನುಗ್ಗಿದೆ ಎನ್ನಲಾಗಿದೆ. ಇದರಿಂದ ಮಾಲಕ ಹನೀಫ್ ಹಾಗೂ ಅವರ ಮಗ ನಿಝಾಮುದ್ದೀನ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಹೋಟೆಲ್ ನಲ್ಲಿದೆ ಹಲವು ಸ್ವತ್ತುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.