ಡೈಲಿ ವಾರ್ತೆ:27 ಫೆಬ್ರವರಿ 2023

ಕಾಡಿನಲ್ಲಿ ಬೆಂಕಿ ನಂದಿಸಲು ಹೋಗಿ ಸುಟ್ಟು ಕರಕಲಾದ ಫಾರೆಸ್ಟ್‌ ವಾಚ್ ಮ್ಯಾನ್

ಯಲ್ಲಾಪುರ: ಕಾಡಿನಲ್ಲಿ ಬೆಂಕಿ ನಂದಿಸಲು ಹೋದಾಗ ತುಂಡಾಗಿ ಬಿದ್ದಿದ ಹೈ ಟೆನ್ಷನ್‌ ವೈಯರ್ ತಾಗಿ ಫಾರೆಸ್ಟ್‌ ವಾಚ್ ಮ್ಯಾನ್ ವೊಬ್ಬರು ಸುಟ್ಟು ಕರಕಲಾಗಿ ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ತೆಲಂಗಾರದ ಬಳಿ ನಡೆದಿದೆ.


ಜೂಜ ಸಿದ್ದಿ ಮೃತ ಫಾರೆಸ್ಟ್‌ ವಾಚ್‌ ಮ್ಯಾನ್.‌
ಕಾಡಿಗೆ ಬೆಂಕಿ ಬಿದ್ದಿದೆ ಎಂದು ಬೆಂಕಿಯನ್ನು ನಂದಿಸಲು ಜೂಜ ಸಿದ್ದಿ ತೆರಳಿದ್ದಾರೆ. ತುಂಡಾಗಿ ಬಿದ್ದಿದ್ದ ಹೈ ಟೆನ್ಷನ್‌ ತಂತಿಯಿಂದಲೇ ಬೆಂಕಿ ಕಾಣಿಸಿಕೊಂಡಿರುವುದನ್ನು ಅರಿಯದ ಜೂಜ ಸಿದ್ದಿ ಅವರು, ಬೆಂಕಿ ನಂದಿಸಲು ಕಾಡಿಗೆ ಹೋಗಿದ್ದಾರೆ. ಆದರೆ ಅಲ್ಲಿ ತುಂಡಾಗಿ ಬಿದ್ದಿದ್ದ ವೈಯರ್‌ ನ್ನು ತುಳಿದು ಫಾರೆಸ್ಟ್‌ ವಾಚ್‌ ಮ್ಯಾನ್‌ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ.