ಡೈಲಿ ವಾರ್ತೆ:01 ಮಾರ್ಚ್ 2023

ಮಾರ್ಚ್ 4 ರಂದು ಹೊನ್ನಾಳ ಜಾಮಿಯ ಮಸೀದಿಯಲ್ಲಿ ಬೃಹತ್ ಸುನ್ನಿ ಇಜ್ತೀಮಾ ಕಾರ್ಯಕ್ರಮ

ಬ್ರಹ್ಮಾವರ: ಹೊನ್ನಾಳದಲ್ಲಿ ಸುನ್ನಿ ಇಜ್ತೀಮಾ
ಸುನ್ನಿ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇನ್ಷಾ ಅಲ್ಲಾಹ ಮಾರ್ಚ್ 4 ನೇ ತಾರೀಕಿನಂದು ಹೊನ್ನಾಳದ ಜಾಮಿಯ ಮಸೀದಿಯಲ್ಲಿ ಬ್ರಹತ್ ಸುನ್ನಿ ಇಜ್ತೀಮಾವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 5.30 ರಿಂದ 6.30 ರ ತನಕ ವಿದ್ಯಾರ್ಥಿಗಳಿಗೆ *ಕೀ ಟು ಸಕ್ಸೆಸ್* ಎಂಬ ವಿಷಯದ ಕುರಿತು ವಿಶ್ವವಿಖ್ಯಾತ ಇಸ್ಲಾಮಿಕ್ ತರಬೇತುದಾರ ಹಾಶ್ಮಿಯಾ ಹೈಸ್ಕೂಲ್ ಮುಂಬೈ ಇದರ ಪ್ರಿನ್ಸೀಪಾಲರು ಆದಂತಹ *ಬುಲ್ ಬುಲೇ ಭಾಗೇ ಮದೀನಾ ಖಾರಿ ರಿಜ್ವಾನ್ ಖಾನ್* ರಿಂದ ಉಪನ್ಯಾಸ ನೀಡಲಿದ್ದಾರೆ.
ಸಂಜೆ 7 ಗಂಟೆಯಿಂದ 8.30 ರ ತನಕ ಕನ್ನಡ ಮಾಧ್ಯಮದಲ್ಲಿ ದಾರುಲ್ ಮುಸ್ತಫಾ ಮೊರಲ್ ಅಕ್ಯಾಡೆಮಿಯ ಪ್ರಿನ್ಸೀಪಾಲರಾದ ಮೊಹಿಯುದ್ದಿನ್ ಕಾಮಿಲ್ ಸಖಾಫಿ ತೊಕೆಯವರಿಂದ *ಸತ್ಯದ ಸಂದೇಶ* ಎಂಬ ವಿಷಯದ ಕುರಿತು ಪ್ರಬಾಷಣ ನೀಡಲಿದ್ದಾರೆ . ರಾತ್ರಿ 9 ಗಂಟೆಯಿಂದ 10.30 ರ ತನಕ *ಖಾರಿ ರಿಜ್ವಾನ್ ಖಾನ್ (ರುಕ್ನೇ ಮಜ್ಲೀಸೆ ಶುಅರಾ ಸುನ್ನಿ ದಾವತೇ ಇಸ್ಲಾಮಿ ಮುಂಬೈ)* ಇವರಿಂದ *ಮಕ್ಕಳ ನೈತಿಕ ಮತ್ತು ಸಮಾಜಿಕ ಸುಧಾರಣೆಯಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿಗಳು* ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ವೇದಿಕೆಯಲ್ಲಿ ಊರ ಮತ್ತು ಪರವೂರಿನ ಧಾರ್ಮಿಕ ಪಂಡಿತರು ಸಾಮಾಜಿಕ ಮುಂದಾಳುಗಳು ಭಾಗವಹಿಸಲಿದ್ದಾರೆ.
ದೀನಿ ಪ್ರೇಮಿಗಳಾದ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ಸುನ್ನಿ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ H. ಸುಭಾನ್ ಅಹ್ಮದ್ ಹೊನ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಕೊಂಡಿದ್ದಾರೆ