ಡೈಲಿ ವಾರ್ತೆ:02 ಮಾರ್ಚ್ 2023

ಗಂಗೊಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕ ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು

ಕುಂದಾಪುರ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ
ಕೋಣ್ಕಿ ನಾಡಾ ಸಮೀಪದ ಎಂಬಲ್ಲಿ ಅಡಿಕೆ ಕೊಯ್ಯಲು ತೆರಳಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಮಾ. 2 ರಂದು ಗುರುವಾರ ನಡೆದಿದೆ.

ಕೋಣ್ಕಿ ಅಂಗಡಿ ಬೆಟ್ಟು ನಿವಾಸಿ ಭುಜಂಗ ಶೆಟ್ಟಿ (58) ಮೃತಪಟ್ಟವರು, ಮನೆಯ ತೋಟದ ಅಡಿಕೆ ಕೊಯ್ಯಲು ಹಾಗೂ ಅಡಿಕೆ ಗರಿಗಳನ್ನು ಕತ್ತರಿಸಲು ಭುಜಂಗ ಶೆಟ್ಟಿ ತೆರಳಿದ್ದರು. ಉದ್ದದ ಕಬ್ಬಿಣದ ಕೊಕ್ಕೆ ಮೂಲಕ ಕೆಲಸ ಮಾಡುತ್ತಿರುವಾಗ ತೋಟದಲ್ಲಿ ಹಾದುಹೋದ ವಿದ್ಯುತ್‌ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.