ಡೈಲಿ ವಾರ್ತೆ:02 ಮಾರ್ಚ್ 2023

ವರದಿ: ವಿದ್ಯಾಧರ ಮೊರಬಾ

ಮಾಜಿ ಸೈನಿಕ ವಿವೇಕ ಗಾಂವಕರ ನಿಧನ : ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ

ಅಂಕೋಲಾ : ತಾಲೂಕಿನ ಬೇಲೆಕೇರಿ ಕರಾವಳಿ ಕಾವಲು ಪಡೆಯ ಠಾಣೆಯಲ್ಲಿ ಕಾನ್ಸ್ಟೇಬಲ್ ರಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಜಿ ಸೈನಿಕ ಮೂಲತಃ ಕುಮಟಾ ತಾಲೂಕಿನ ನಾಡಮಾಸ್ಕೇರಿಯ ಹಾಲಿ ಅಂಕೋಲಾ
ಕೇಣಿಯ ನಿವಾಸಿ ವಿವೇಕ ಶ್ರೀನಿವಾಸ ಗಾವಂಕರ (55) ಮಂಗಳೂರು ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನಗೊಂಡಿದ್ದಾರೆ.

ಪತ್ನಿ ಸರ್ಕಾರಿ ಪ್ರೌಢ ಶಾಲೆ ಕೇಣಿಯಲ್ಲಿ ಶಿಕ್ಷಕಿಯಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ. ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ.

ಅಂತಿಮ ಗೌರವ : ಕರಾವಳಿ ಕಾವಲು ಪಡೆ ಠಾಣೆಯ ಸಿಬ್ಬಂದಿಗಳು ಪಾರ್ಥಿವ ಶರೀರಕ್ಕೆ ಶಿಸ್ತು ಬದ್ಧ ಪಥ ಸಂಚಲನ ನಡೆಸಿ, ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಮರ್ಪಸಿದರು. ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆ ಠಾಣೆಯ ಪಿಎಸ್‍ಐಗಳಾದ ಪ್ರಿಯಾಂಗ ನ್ಯಾಮನಗೌಡ್, ನಾಗೇಶ ನಾಯ್ಕ, ಬೋಟ್ ಕ್ಯಾಪ್ಟನ್ ಆನಂದ ಗಾಂವಕರ ಅಲಗೇರಿ, ಎ.ಎಸ್.ಐ ರಾಜು ಆಗೇರ, ಸಿಬ್ಬಂದಿಗಳಾದ ದತ್ತಾತ್ರೇಯ ಹರಿಕಂತ್ರ, ಮಹಾಬಲೇಶ್ವರ ನಾಯಕ, ವಾಣಿ ನಾಯಕ, ಸೀಮಾ ನಾಯ್ಕ ಮತ್ತು ಸಶಸ್ತ್ರ ಪೊಲೀಸ್
ಪಡೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.