ಡೈಲಿ ವಾರ್ತೆ:03 ಮಾರ್ಚ್ 2023

ಜಿ.ಕೆ.ಎಂಟರ್‌ಪ್ರೈಸಸ್ ಮಾಲಕ ಗಣೇಶ್ ಕಾಮತ್ ಹೃದಯಾಘಾತದದಿಂದ ಮೃತ್ಯು

ಮೂಡುಬಿದಿರೆ: ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಇಂದು ನಿಧನ
ಮೂಡುಬಿದಿರೆಯಲ್ಲಿರುವ ತನ್ನ ಎಂಟರ್ ಪ್ರೈಸಸ್‌ಗೆ ಆಗಮಿಸುತ್ತಿದ್ದಾಗ ಹೃದಯದ ನೋವಿಗೊಳಗಾಗಿ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇವರು ವಿದ್ಯುತ್ ಅವಘಡದಿಂದ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದರೂ ಛಲಬಿಡದೆ ಜಿ.ಕೆ ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡು ಹಲವಾರು ಜನರಿಗೆ ಉದ್ಯೋಗದಾತರಾಗಿದ್ದರು.

ಇವರು ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನ, ಕಡಿಯಾಳಿ ಬ್ರಹ್ಮಕಲಶೋತ್ಸವ, ಕಮಲಶಿಲೆಯಲ್ಲಿ ನಡೆದ ಯಾಗ ಗೋಕರ್ಣ ಮಠದ ಯಶಸ್ವಿ ಕಾರ್ಯಕ್ರಮ ಮತ್ತು ಇನ್ನಿತರ ಪ್ರಸಿದ್ಧ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.