ಡೈಲಿ ವಾರ್ತೆ:06 ಮಾರ್ಚ್ 2023

ಹಿಮಾಮಿ ಪದವಿ ಪಡೆದ ಮುಹಮ್ಮದ್ ರೈಹಾನ್ ಅವರಿಗೆ ಕುಂದಾಪುರ ಎಂ.ಕೋಡಿಯ ಬಿಲಾಲ್ ಜುಮ್ಮಾ ಮಸೀದಿವತಿಯಿಂದ ಸನ್ಮಾನ

ಕುಂದಾಪುರ:ಪ್ರತಿಷ್ಠಿತ ಮುಹಿಮ್ಮಾತ್ ವಿದ್ಯಾಸಂಸ್ಥೆಯಲ್ಲಿ ಹನ್ನೆರಡು ವರ್ಷಗಳ ಕಾಲ ಕಲಿತು ಹಿಮಾಮಿ ಪದವಿಯನ್ನು, ಪಡೆದ ಕುಂದಾಪುರ ತಾಲೂಕಿನ ಎಂ. ಕೋಡಿ ಗ್ರಾಮ ಇಕ್ಬಾಲ್, ಆಯಿಷಾಬಿ ದಂಪತಿಗಳ ಸುಪುತ್ರ ಮುಹಮ್ಮದ್ ರೈಹಾನ್ ಅವರಿಗೆ ಮಾ. 6 ರಂದು ಸೋಮವಾರ ಇಶಾ ನಮಾಜ್ ನಂತರ ಕುಂದಾಪುರ ಎಂ. ಕೋಡಿಯ ಬಿಲಾಲ್ ಜುಮ್ಮಾ ಮಸೀದಿವತಿಯಿಂದ ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಮಾತಿನ ಅಧ್ಯಕ್ಷರು, ಖತಿಬರು, ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.