ಡೈಲಿ ವಾರ್ತೆ:08 ಮಾರ್ಚ್ 2023

ಕೊರೋನ ವೇಳೆ ಒಂದು ಕೆಜಿ ಅಕ್ಕಿ ಕೊಡದ ಸಿಟಿ ರವಿ, ಯುಗಾದಿಗೆ ಕೊಟ್ಟ ಸೀರೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ ಗ್ರಾಮಸ್ಥರು.!

ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿ.ಟಿ.ರವಿ ಬೆಂಬಲಿಗರು ಯುಗಾದಿ ಹಬ್ಬಕ್ಕೆ ಸೀರೆ ಹಂಚಿಕೆ ಮಾಡಿದ್ದು, ಈ ವೇಳೆ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿಯಲ್ಲಿ ಮತದಾರರಿಗೆ ಶಾಸಕ ಸಿ.ಟಿ. ರವಿ ಬೆಂಬಲಿಗರು ಸೀರೆ ಹಂಚಿಕೆ ಮಾಡಿದ್ದಾರೆ.
ಈ ವೇಳೆ ಭಕ್ತರಹಳ್ಳಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕೊರನಾ ವೇಳೆ 1 ಕೆಜಿ ಅಕ್ಕಿ ಕೊಡುವ ಯೋಗ್ಯತೆ ಇರಲಿಲ್ಲ, ಚುನಾವಣೆ ಇದೇ ಎಂದು ಸೀರೆ ಹಂಚುತ್ತಿರಾ?ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಬಿಜೆಪಿ ಮುಖಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಿಜೆಪಿಯವರು ಹಂಚಿಕೆ ಮಾಡಿದ್ದ ಸೀರೆಗಳನ್ನು ಗ್ರಾಮಸ್ಥರು ಸುಟ್ಟು ಹಾಕಿದ್ದಾರೆ.