ಡೈಲಿ ವಾರ್ತೆ:09 ಮಾರ್ಚ್ 2023

ಬಿ.ಸಿ.ರೋಡ್ : ಮಾರ್ಚ್ 10 ರಂದು ಸಮಸ್ತ ಆದರ್ಶ ಮಹಾ ಸಮ್ಮೇಳನ.

ಬಂಟ್ವಾಳ : ಎಸ್ಕೆಎಸ್ಸೆಸ್ಸಫ್ ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸಮಸ್ತ ಆದರ್ಶ ಮಹಾ ಸಮ್ಮೇಳನವು ಮಾರ್ಚ್ 10 ರಂದು ಸಂಜೆ ಬಿ.ಸಿ.ರೋಡ್ ಪೂಂಜಾ ಮೈದಾನದ ಶೈಖುನಾ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.

ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್, ಪ್ರೊಫೆಸರ್ ಅಲಿ ಕುಟ್ಟಿ ಮುಸ್ಲಿಯಾರ್, ಸಯ್ಯಿದ್ ‌ಹಮೀದ್ ಅಲಿ ಶಿ‌ಹಾಬ್ ತಂಙಳ್ ಪಾಣಕ್ಕಾಡ್, ಶೈಖುನಾ ಉಮ್ಮರ್ ಮುಸ್ಲಿಯಾರ್ ಕೋಯಿ ಕ್ಕೋಡ್, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ, ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ಲಾ ಮುಸ್ಲಿಯಾರ್ ಎಡಪ್ಪಾಳ, ಉಸ್ಮಾನುಲ್ ಫೈಝಿ ತೋಡಾರು, ಮುಸ್ತಫಾ ಅಶ್ರಫಿ ಕಕ್ಕುಪಡಿ, ರಶೀದ್ ಫೈಝಿ ವಳ್ಳಾಯಿಕೋಡ್, ಹಾಗೂ ಸತ್ತಾರ್ ಪಲ್ಲಂದೂರು ಮೊದಲಾದ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.