ಡೈಲಿ ವಾರ್ತೆ:14 ಮಾರ್ಚ್ 2023

ಆಸ್ತಿಗಾಗಿ ಸಹೋದರಿಯರ ಬರ್ಬರ್ ಕೊಲೆ : ಆರೋಪಿ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ ಪೊಲೀಸರು

ಬಾಗಲಕೋಟೆ :ಆಸ್ತಿ ವಿಚಾರಕ್ಕಾಗಿ ಕಲಹ ಉಂಟಾಗಿ, ಸಂಬಂಧಿಕರಿಂದಲೇ ಇಬ್ಬರು ಸಹೋದರಿಯರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಸೋಮವಾರ ಪೇಟೆಯ ಕುರುಬರ ಓಣಿಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಯಲ್ಲವ್ವ ಭುಜಂಗ (48) ಹಾಗೂ ಬೌರವ್ವ ಭುಜಂಗ (45) ಕೊಲೆಯಾದ ದುರ್ದೈವಿಗಳು. ಸಹೋದರ ಅತ್ತಿ ಮಗ ಕಟ್ಟಿಗೆ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಇದೆ.

ಘಟನೆ ಮಾಹಿತಿ ಪಡೆದ ಬನಹಟ್ಟಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಮದುವೆಯಾದರೂ ತವರು ಮನೆಯಲ್ಲಿ ವಾಸವಿದ್ದ ಇಬ್ಬರು ಮಹಿಳೆಯರು, ನಿತ್ಯ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಕೊಲೆಗೆ ಆಸ್ತಿಯ ವಿಚಾರವೋ ಅಥವಾ ಅನೈತಿಕ ಸಂಬಂಧವೇ ಎಂಬುದು ಪೊಲೀಸರು ತನಿಖೆ ನಡೆಸಬೇಕಾಗಿದೆ