ಡೈಲಿ ವಾರ್ತೆ:14 ಮಾರ್ಚ್ 2023

ಅಜಾಗರೂಕತೆ ಚಾಲನೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರು ಮೃತ್ಯು!

ಬೆಂಗಳೂರು: ಅಜಾಗರೂಕತೆ ಚಾಲನೆಯಿಂದ ಇಬ್ಬರು ಯುವಕರು ದಾರುಣವಾಗಿ ಬಲಿಯಾಗಿರೋ ಘಟನೆ ಮಡಿವಾಳದ ಸಿಲ್ಕ್ ಬೋರ್ಡ್‌ನಲ್ಲಿ ನಡೆದಿದೆ. ಕಾರ್ತಿಕ್ (23), ಭಗೀರಥ ರೆಡ್ಡಿ (17) ಮೃತ ದುರ್ದೈವಿಗಳು.

ಮೃತ ದುರ್ದೈವಿಗಳು ಆಂಧ್ರ ಪ್ರದೇಶದ ಅನಂತಪುರ ಮೂಲದ ನಿವಾಸಿಗಳು. ಒಂದೇ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಅತೀ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಮುಂದೆ ಇದ್ದ ತಮಿಳುನಾಡು ಸಾರಿಗೆ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಮಡಿವಾಳ ಸಂಚಾರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.