ಡೈಲಿ ವಾರ್ತೆ:14 ಮಾರ್ಚ್ 2023

ಪಾಟ್ರಕೋಡಿಯನ್ನು ಮಿನಿ ಪಾಕಿಸ್ತಾನ ಎಂದು ದೇಶದ್ರೋಹಿ ಹೇಳಿಕೆ ನೀಡಿದ ಮಾಣಿ ನರಸಿಂಹನ ವಿರುದ್ಧ ಪಾಟ್ರಕೋಡಿ ನಾಗರಿಕರಿಂದ ಪ್ರಕರಣ ದಾಖಲು.!

ಇಡ್ಕಿದು: ಮಿತ್ತೂರು ಜಂಕ್ಷನ್ ನಲ್ಲಿ ಮಾ. 12 ರಂದು ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಪ್ರತಿಭಟನೆ ಉದ್ದೇಶಿಸಿ ಭಾಷಣ ಮಾಡಿದ ಮಾಣಿ ನರಸಿಂಹ ಎಂಬಾತ ಜಿಲ್ಲೆಯಲ್ಲಿಯೇ ಇದುವರೆಗೂ ಒಂದು ಕೇಸು ದಾಖಲಾಗದ ಕೋಮು ಸೌಹಾರ್ದತೆಯನ್ನು ಎತ್ತಿಹಿಡಿದ ಕೆದಿಲ ಗ್ರಾಮದ ಪಾಟ್ರಕೋಡಿಯನ್ನು ‘ಮಿನಿ ಪಾಕಿಸ್ತಾನ‘ ಎಂದು ದೇಶದ್ರೋಹಿ ಹೇಳಿಕೆ ನೀಡಿದ್ದು, ಅಲ್ಲಿ ಜೀವಿಸುವ ನಾಗರಿಕರನ್ನು ದೇಶದ್ರೋಹಿಗಳು, ದನಕಳ್ಳರು,ಎಂದು ಆರೋಪಿಸಿದನ್ನು ಖಂಡಿಸಿ ಪಾಟ್ರಕೋಡಿಯ ನಾಗರಿಕರಿಂದ ಮಾರ್ಚ್ 14 ರಂದು ವಿಟ್ಲ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಿ ನರಸಿಂಹನ ಮೇಲೆ ಎಫ್ಐಆರ್ ದಾಖಲಿಸಲು ಠಾಣೆ ಆರಕ್ಷಕ ಅಧಿಕಾರಿಯಲ್ಲಿ ಮನವಿ ಸಲ್ಲಿಸಿದರು…