ಡೈಲಿ ವಾರ್ತೆ:18 ಮಾರ್ಚ್ 2023

ಮಾ. 19 ರಂದು ಕೋಟ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಹದಿಯರೆಯದ ಸಮಸ್ಯೆಗಳ ಮಾಹಿತಿ ಕಾರ್ಯಾಗಾರ

ಕೋಟ: ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಾತೃಸಂಸ್ಥೆ ಕೋಟ ಪಂಚವರ್ಣ ಯುವಕ ಮಂಡಲದ
ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಸಾಮಾಜಿಕ ಕಾರ್ಯಕ್ರಮ ಹದಿಹರೆಯದವರ ಸಮಸ್ಯೆಗಳ ಬಗ್ಗೆ ಎರಡನೇ ಸರಣಿ ಮಾಹಿತಿ ಕಾರ್ಯಕ್ರಮ ಅರಿವು ನಿಮಗಿರಲಿ ನೆರವು ಎಂಬ ಶೀರ್ಷಿಕೆಯಡಿ ಕೋಟ ಮೂಡುಗಿಳಿಯಾರು ಶಾಲಾ
ಸಭಾಂಗಣದಲ್ಲಿ ಸ್ಥಳೀಯ ಸಂಜೀವಿನಿ ಸ್ವಸಹಾಯ, ಧರ್ಮಸ್ಥಳ ಗ್ರಾ.ಯೋ.ಸ್ತ್ರೀ ಶಕ್ತಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾ.19 ಭಾನುವಾರ ಪೂರ್ವಾಹ್ನ 11ಗ. ಕಾರ್ಯಕ್ರಮ
ಹಮ್ಮಿಕೊಂಡಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಸಮಾಜಸೇವಕಿ ಕಲ್ಪನಾ ಭಾಸ್ಕರ್
ಭಾಗವಹಿಸಲಿದ್ದಾರೆ ಎಂದು ಪಂಚವರ್ಣ ಮಹಿಳಾ ಮಂಡಲದ ಆದ್ಯಕ್ಷೆ ಕಲಾವತಿ ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.