ಡೈಲಿ ವಾರ್ತೆ:20 ಮಾರ್ಚ್ 2023

ಕರ್ತವ್ಯ ನಿರತ ಎಎಸ್ ಐ ಹೃದಯಾಘಾತದಿಂದ ಮೃತ್ಯು

ಆನೇಕಲ್: ಕರ್ತವ್ಯ ನಿರತ ಎಎಸ್ಐ‌ ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಗಣಿ ಬಳಿ ನಡೆದಿದೆ.

ಜೆ.ಶ್ರೀನಿವಾಸ್ (60) ಹೃದಯಾಘಾತದಿಂದ ಮೃತ ಎಎಸ್ ಐ.ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಶ್ರೀನಿವಾಸ್ ಅವರು ನಿನ್ನೆ ರಾತ್ರಿ ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯ ಕೊಪ್ಪಗೇಟ್ ಬಿಟ್ಟು ಜಿಗಣಿ ಕಡೆ ಬೈಕ್ನಲ್ಲಿ ತೆರಳುತ್ತಿದ್ದಾಗ ರಕ್ತದೊತ್ತಡ ಹೆಚ್ಚಾಗಿ ಕೆಳಗೆ ಬಿದ್ದಿದ್ದರು.

ಪರಿಣಾಮ ಭುಜಕ್ಕೆ ಗಾಯವಾಗಿತ್ತು ಕೂಡಲೇ ಜಿಗಣಿ ಪೊಲೀಸರು ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಮುಂಜಾನೆ ವೇಳೆ ಅವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಹಲಸೂರಿನವರಾಗಿದ್ದ ಶ್ರೀನಿವಾಸ್ ಆನೇಕಲ್ ಉಪ ವಿಭಾಗದ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು.ಇವರು ನಿವೃತ್ತಿ ಹೊಂದಲು ಕೇವಲ ಎರಡು ತಿಂಗಳು ಮಾತ್ರ ಬಾಕಿ ಇತ್ತು.