ಡೈಲಿ ವಾರ್ತೆ:20 ಮಾರ್ಚ್ 2023

ಕೋಟ: ಕೊಮೆ ಬೀಚ್ ಗೆ ದಿಢೀರ್ ಪೊಲೀಸ್ ದಾಳಿ – ಮದ್ಯ ಸೇವನೆ‌, ಮಲಿನಗೊಳಿಸುತ್ತಿರುವ ಆರೋಪಿಯ ಬಂಧನ

ಕೋಟ :ಕುಂದಾಪುರ‌ ತಾಲ್ಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಮೆ ಬೀಚ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ‌ ಶರಾಬು ಸೇವನೆ‌ ಮಾಡಿ ಬೀಚ್ ಮಲಿನಗೊಳಿಸುತ್ತಿರುವ ಮಾಹಿತಿಯ ಮೇರೆಗೆ ಕೋಟ ಆರಕ್ಷಕ ಠಾಣಾಧಿಕಾರಿ ಮಧು ಬಿ.ಇ ದಿಢೀರ್ ದಾಳಿ ನಡೆಸಿ ಮಣೂರಿನ ಒರ್ವ ಆರೋಪಿ ಸುದೀಪ ಎನ್ನುವ ಯುವಕನನ್ನು ವಶಕ್ಕೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.

ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಬೀಚ್ ಗಳು ಪಾರ್ಟಿ ಮೊಜು ಮಸ್ತಿಯಿಂದ ಮಲಿನಗೊಳ್ಳುತ್ತಿದ್ದು ಮದ್ಯ ಸೇವಿಸಿ ಅದರ ಮತ್ತಿನಲ್ಲಿ ಬೀರ್ ಬಾಟಲಿಗಳನ್ನು ಒಡೆದು ಬೀಚ್ ಗಳನ್ನು ಮಲಿನಗೊಳಿಸುತ್ತಿದ್ದಾರೆ ಈ ಹಿನ್ನಲೆಯಲ್ಲಿ
ಕೋಟ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಪ್ರಸನ್ನ, ರಾಘವೇಂದ್ರ,ರಾಜೇಶ್ ಮತ್ತು ಚಾಲಕ ಗೋಪಾಲ್ ದಾಳಿ ನಡೆಸಿ ಮದ್ಯ ಸೇವಿಸಿ ಬೀಚ್ ಹಾನಿಗೊಳಿಸುವವರಿಗೆ ಕಡಿವಾಣ ಹಾಕಿದ್ದಾರೆ. ಈ ಕುರಿತಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.