ಡೈಲಿ ವಾರ್ತೆ:22 ಮಾರ್ಚ್ 2023

ಕುಣಿಗಲ್: ಬೈಕ್ ಅಪಘಾತ ಇಬ್ಬರು ಯುವಕರು ಮೃತ್ಯು

ಕುಣಿಗಲ್ : ಬೈಕ್ ಅವಘಡದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಪಟ್ಟಣದ‌ ರಾಜ್ಯ ಹೆದ್ದಾರಿ 33 ಚಿಕ್ಕಕರೆ ಸೇತುವೆ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ವಾಸಿ ಇಂಜಿನಿಯರ್ ಚೇತನ್( 28) ಕೋಟೆ ಪ್ರದೇಶದ ವಾಸಿ ಕಿರಣ್( 19) ಮೃತ ದುರ್ದೈವಿಗಳು.

ಘಟನೆ ವಿವರ ಚೇತನ್ ಹಾಗೂ ಕಿರಣ್ ಇಬ್ಬರು ಯುವಕರು ಬೈಕ್ ನಲ್ಲಿ ಕುಣಿಗಲ್ ಪಟ್ಟಣದ ಮಾರ್ಗವಾಗಿ ಹುಲಿಯೂರುದುರ್ಗ ಕಡೆ ಹೊಗುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಬೈಕ್ ಅಪಘಾತವಾಗಿದೆ ಎನ್ನಲಾಗಿದ್ದು ಸ್ಥಳದಲ್ಲೇ ಚೇತನ್ ಮೃತಪಟ್ಟಿದ್ದಾನೆ. ಕಿರಣ್ ಗೆ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಅದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.