ಡೈಲಿ ವಾರ್ತೆ:23 ಮಾರ್ಚ್ 2023

ಮಾ 25 ರಂದು ಶಿರಿಯಾರದಲ್ಲಿ ಸಾಲಿಗ್ರಾಮ ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿ ಮೇಳದ ಐದು ಜನ ಕಲಾವಿದರಿಗೆ ಸನ್ಮಾನ

ಕೋಟ: ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿನಾಂಕ 25 ರಂದು ಶನಿವಾರ ರಾತ್ರಿ ಶಿರಿಯಾರ ಪೇಟೆ ಗಣೇಶ್ ಪ್ರಸಾದ್ ಕಾಂಚನ್ ರವರ ಮನೆಯ ಮುಂಭಾಗದಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮ ದಲ್ಲಿ ಸಾಲಿಗ್ರಾಮ ಮೇಳದ 5 ಕಲಾವಿದರಿಗೆ ಸನ್ಮಾನ ನಡೆಯಲಿದೆ.

ಸನ್ಮಾನಿತರು ಮೇಳದ ಪ್ರದಾನ ಭಾಗವತರು ರಾಮಕೃಷ್ಣ ಹೆಗಡೆ, ಪ್ರಧಾನ ಮದ್ದಳೆ ವಾದಕ ಪರಮೇಶ್ವರ್ ಬಂಡಾರಿ ಕರ್ಕಿ ಹಾಗೂ ಖ್ಯಾತ ಸ್ತ್ರಿ ಪಾತ್ರ ದಾರಿ ಶಂಕರ್ ಹೆಗಡೆ ನಿಲ್ಕೋಡು, ಮತ್ತು ಪ್ರಧಾನ ವೇಷಧಾರಿಗಳಾದ ಈಶ್ವರ್ ನಾಯ್ಕ್ ಮಂಕಿ ಹಾಗೂ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.

ಅಲ್ಲದೆ ಯಕ್ಷಗಾನದಲ್ಲಿ ವಿಶೇಷ ಆಕರ್ಷಣೆಯಾಗಿ ಪ್ರಥಮ ಬಾರಿಗೆ ಸಾಲಿಗ್ರಾಮ ಮೇಳದ ರಂಗದಲ್ಲಿ ನಮನ್ ಮಲ್ಯ ಹಾಗೂ ಆದ್ಯಾ ಭಟ್ ಕಲ್ಯಾಣಪುರ ಸಂತೆಕಟ್ಟೆ ಇವರ
ಬಾಲಗೋಪಾಲರ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.