ಡೈಲಿ ವಾರ್ತೆ:24 ಮಾರ್ಚ್ 2023

ದಕ್ಷಿಣಕನ್ನಡ : ‘ಅಂಗಾರ ಸಾಕು, ಹೊಸಬರು ಬೇಕು’ – ಸುಳ್ಯ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ಬ್ಯಾನರ್ ಪ್ರತ್ಯಕ್ಷ!

ಮಂಗಳೂರು: ‘ಅಂಗಾರ ಸಾಕು ಹೊಸಬರು ಬೇಕು’ ಸುಳ್ಯ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ಬ್ಯಾನರ್ ಪ್ರತ್ಯಕ್ಷ. ಸಚಿವ ಅಂಗಾರ ಕ್ಷೇತ್ರದಲ್ಲಿ ಕಾಣಿಸಿಕೊಂಡ ಬ್ಯಾನರ್ ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ, ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಕ್ಷೇತ್ರದಲ್ಲಿ ಸತತ ಆರು ಬಾರಿ ಶಾಸಕರಾಗಿ ಅಯ್ಕೆಯಾಗಿದ್ದ ಎಸ್. ಅಂಗಾರ ಇದೀಗ ಬಿಜೆಪಿ ಕಾರ್ಯಕರ್ತರಿಂದಲೇ ಬದಲಾವಣೆ ಕೂಗು ಸುಳ್ಯ ಕ್ಷೇತ್ರದ ಹಲವು ಕಡೆಗಳಲ್ಲಿ ಬ್ಯಾನರ್ ಪ್ರತ್ಯಕ್ಷವಾಗಿದೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬದಲಾವಣೆ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಈ ಬಾರಿ ಕಾರ್ಯಕರ್ತರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.