ಡೈಲಿ ವಾರ್ತೆ:09 ಏಪ್ರಿಲ್ 2023

ಕೋಟ: ಸಮಾಜ ಸೇವಕ, ಸ್ಥಳೀಯ ಯುವ ಮುಖಂಡ ಬಾರಿಕೆರಿ ನಾಗೇಂದ್ರ ಪುತ್ರನ್ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆ

ನಾಗೇಂದ್ರ ಪುತ್ರನ್

ಕೋಟ: ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಮತ್ತು ಕ್ಷೇತ್ರದ ಅಭಿವೃದ್ಧಿ ಪರ ಚಿಂತನೆಗಳನ್ನು ಬೆಂಬಲಿಸಿ ಸಮಾಜ ಸೇವಕ ಕೋಟ ಭಾಗದ ಸ್ಥಳೀಯ ಯುವ ಮುಖಂಡ ಬಾರಿಕೆರೆ ನಾಗೇಂದ್ರ ಪುತ್ರನ್ ರವರು ಅಪಾರ ಬೆಂಬಲಿಗರೊಂದಿಗೆ ಸೇರಿ ಏ. 9 ರಂದು ಭಾನುವಾರ ಕೋಟ ಬ್ಲಾಕ್ ಕಾಂಗ್ರೆಸ್ ನ ಇಂದಿರಾ ಭವನ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರಾದ ಶಂಕರ್ ಎ. ಕುಂದರ್ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಆಶಾಕಿರಣ ದಿನೇಶ್ ಹೆಗ್ಡೆ ಮೊಳಹಳ್ಳಿ ಮತ್ತು ಕೋಟತಟ್ಟು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುರೇಶ ಕೆಚ್ಚೆಕೆರೆ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಇವರನ್ನು ಆತ್ಮೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ರಾಜಕೀಯ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಸಂತ ಸುವರ್ಣ ಮಣೂರು, ದೀಪು ಕೋಟ, ಪ್ರಶಾಂತ್ ಬಸ್ರೂರು, ಸತೀಶ್ ಬಸ್ರೂರು, ಅಭಿಷೇಕ್ ಕೋಟ ಕಿಶೋರ್ ಪಡುಕರೆ, ಗೋಪಾಲ್ ಕೃಷ್ಣ ಕೋಟ, ಹಾಗೂ ನೂರಾರು ಬೆಂಬಲಿಗರು ನಾಗೇಂದ್ರ ಪುತ್ರನ್ ಜೊತೆಗಿದ್ದರು.