ಡೈಲಿ ವಾರ್ತೆ:18 ಏಪ್ರಿಲ್ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾದ ಯುವತಿ ಅಸೌಖ್ಯದಿಂದ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಸಾವು

ಅಂಕೋಲಾ : ಖಾಸಗಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ಯುವತಿಯೊಬ್ಬಳು ಯಾದಗಿರಿ ಜಿಲ್ಲೆಯ ಲಿಂಗಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ತಾಲೂಕಿನ ಅಚವೆ ಅಂಗಡಿಬೈಲ್ ಗ್ರಾಮದ ನಿವೇದಿತಾ ನರಸಿಂಹ ಭಟ್ ನಾಕ್ಮನೆ (26) ಮೃತಪಟ್ಟ ಮಹಿಳೆ. ಖಾಸಗಿ ಶಿಕ್ಷಕಿ.

ಇವರು ಕಳೆದ 2 ವರ್ಷದಿಂದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಎಸ್.ಕೆ. ಪಿಯು ಕಾಲೇಜಿನಲ್ಲಿ ಬಯೋಲಜಿ (ಜೀವಶಾಸ್ತ್ರ) ವಿಷಯದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ನಿವೇದಿತಾ ಸಹದ್ಯೋಗಿ ಹೇಳುವಂತೆ ರಾತ್ರಿ ವೇಳೆ ಅಲ್ಪ ಪ್ರಮಾಣದಲ್ಲಿ ವಾಂತಿ ಕಾಣಿಸಿಕೊಂಡಿದ್ದು, ಅಲ್ಲಿಯ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸೂರಿನ ನಾಡಗೌಡ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗದೆ ಅಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಪೋಷಕರ ಆರೋಪ: ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಪಡಿಸಿರುವ ಮಾಹಿತಿ ಪಾಲಕರಿಗೆ ವಿಳಂಬವಾಗಿದೆ. ಲಿಂಗ ಸೂರು ನಾಡಗೌಡ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ 3.45ಕ್ಕೆ ಮೃತಪಟ್ಟಿರುವುದರಿಂದ ಆ ವ್ಯಾಪ್ತಿಯ ಪೊಲೀಸ ಠಾಣೆಗೆ ದೂರು ದಾಖಲಾಗಿಲ್ಲಾವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಕರು ನಿವೇದಿತಾ ಸಾವಿನ ಕುರಿತು ಸಂದೇಹ ಇದೆ ಎಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ