ಡೈಲಿ ವಾರ್ತೆ:29 ಏಪ್ರಿಲ್ 2023

ಬಿಜೆಪಿಯ ಭೃಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ದ : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ

ಬಂಟ್ವಾಳ : ಬಿಜೆಪಿಯವರು ನಡೆಸುತ್ತಿರುವ ಬೃಷ್ಟಾಚಾರವನ್ನು ಕಂಡು ಎಂದಿಗೂ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳಲಾರೆ. ಅವರು ಮಾಡಿರುವ ಭೃಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ದ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.

ಇಡ್ಕಿದು ಗ್ರಾಮದ ಉರಿಮಜಲಿನಲ್ಲಿ ನಡೆದ ಇಡ್ಕಿದು ವಲಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು
ನಾನು ಏನೇ ಮಾತಾಡಿದರು ಬಿಜೆಪಿಯವರು ಅದನ್ನು ತಿರುಚಿ ನನ್ನ ಬಗ್ಗೆ ಅಪಪ್ರಚಾರ ಮಾಡುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ, ನಾನು ಯಾವತ್ತು ಯಾವುದೇ ಪಕ್ಷ, ಜಾತಿಯನ್ನು ನಿಂಧಿಸಿದವನಲ್ಲ. ಎಲ್ಲಾ ಜಾತಿ, ಪಕ್ಷವನ್ನು ಸಮಾನವಾಗಿ ಕಂಡಿದ್ದೇನೆ.

ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ತೆರಿಗೆ ಪಾವತಿಸುವ ಪ್ರದೇಶವೆಂದರೆ ಅದು ಮಂಗಳೂರು. ಆದರೆ ನಮ್ಮಲ್ಲಿ ಹೇಳುವಂತಹ ಅಭಿವೃದ್ಧಿ ಏನೂ ಆಗಿಲ್ಲ‌. ಪುತ್ತೂರಿಗೆ ಅತೀ ಅಗತ್ಯವಿರುವ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಕೆಲಸ ರಾಜ್ಯ ಹಾಗು ಕೇಂದ್ರದಲ್ಲಿರುವ ಬಿಜೆಪಿಯ ಡಬ್ಬಲ್ ಇಂಜಿನ್ ಸರಕಾರದಿಂದ ಆಗಿಲ್ಲ‌. ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವವನ್ನು ಹೇಳಿಕೊಂಡು ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ.
ಕಾರ್ಯಕರ್ತರು ಪ್ರತಿಯೊಂದೂ ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿಹೇಳುವ ಕೆಲಸ ಮಾಡಬೇಕು. ನಮ್ಮ ಧರ್ಮವನ್ನು ಪ್ರೀತಿಸಿ, ಸಹೋದರ ಧರ್ಮವನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ನಾನು ಯಾವತ್ತೂ ಜಾತಿ – ಭೇದ ಮಾಡಿಲ್ಲ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ‌, ಮಾನವೀಯತೆಯ ಅಡಿಯಲ್ಲಿ ಕೆಲಸಮಾಡಿದ್ದೇನೆ. ನಿಮ್ಮ ಘನತೆ ಗೌರವಕ್ಕೆ ಚ್ಯುತಿ ಭಾರದಂತೆ ಕೆಲಸ ಮಾಡುತ್ತೇನೆ. ವ್ಯತ್ಯಾಸಗಳು ಎಲ್ಲಾ ಕಡೆಯಲ್ಲಿದೆ ಅದನ್ನು ಸರಿಪಡಿಸಕೊಂಡು ಮುನ್ನಡೆಯೋಣ. ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ಅಶೋಕ್ ಕುಮಾರ್ ರೈ ವಿನಂತಿಸಿದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಮಾತನಾಡಿ ನಾವು ಈಗಾಗಲೇ ಚುನಾವಣೆಗೆ ಸನ್ನದ್ದರಾಗಿದ್ದೇವೆ. ಸಮಾನತೆಯ ಸಂದೇಶ ಸಾರಿದ ಕಾಂಗ್ರೆಸ್ ಪಕ್ಷ ಜನರಿಗೆ ಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ.


ಬಿಜೆಪಿಗರ ಈ ಕುತಂತ್ರವನ್ನು ಜನರಿಗೆ ಮನಮುಟ್ಟುವ ರೀತಿಯಲ್ಲಿ ನಾವು ತಿಳಿಹೇಳುವ ಕೆಲಸವಾಗಬೇಕು. ನಮ್ಮ ಕಾರ್ಯಕರ್ತರು ಯಾವುದರೆ ಟೀಕೆ – ಟಿಪ್ಪಣಿ ಗಳಿಗೆ ಕಿವಿಕೊಡದೆ ಮುಂದುವರಿಯಬೇಕಾಗಿದೆ. ಕಾಂಗ್ರೆಸ್ ಈ ಹಿಂದೆ ನೀಡಿದ ಪ್ರಣಾಳಿಕೆಯಂತೆ ನಡೆದುಕೊಂಡಿದ್ದು ಪ್ರಾಮಾಣಿಕತೆಯಿಂದ ಕೆಲಸ ಮಾಡಿದೆ. ಕಬಕ- ವಿಟ್ಲ ರಸ್ತೆಯ ಅವ್ಯವಸ್ಥೆಯ ಕುರಿತಾಗಿ ಕಾಂಗ್ರೆಸ್ ಕಬಕದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಡಾಮರೀಕರಣ ಮಾಡಲಾಗಿದೆ. ಆದರು ಅದು ಸಂಪೂರ್ಣ ಕಳಪೆಯಾಗಿದ್ದು ಚುನಾವಣೆ ಸಂದರ್ಭದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ. ಈ ಡಾಮರೀಕರಣ ಒಂದು ಮಳೆಗೆ ಎದ್ದುಹೋಗಿ, ಹೊಂಡ ನಿರ್ಮಾಣವಾಗಲಿದೆ ಎಂದು ಆರೋಪಿಸಿದ ಅವರು ಅಶೋಕ್ ಕುಮಾರ್ ರೈ ಓರ್ವ ಸಮರ್ಥ ಅಭ್ಯರ್ಥಿ. ಪ್ರತಿಯೋರ್ವ ಬಡವನ ಕಣ್ಣೀರು ಒರೆಸುವ ಕೆಲಸ ಅಶೋಕ್ ಕುಮಾರ್ ರೈಯವರಿಂದ ಆಗುತ್ತಿದೆ. ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು

ಕೆಪಿಸಿಸಿ ಕಾರ್ಯದರ್ಶಿಯಾದ ಎಂ.ಎಸ್. ಮುಹಮ್ಮದ್ ಮಾತನಾಡಿ ಮೇ.೧೦ ನಮಗೊಂದು ಸುದಿನ. ನಮ್ಮ ಭವಿಷ್ಯವನ್ನು ನಿರ್ಧರಿಸುವ ದಿನವಾಗಿದೆ‌. ನಮ್ಮ ದುಃಖ ಯಾತನೆಗೆ ಉತ್ತರಕೊಡುವ ದಿನವಾಗಿದೆ. ಕರ್ನಾಟಕದಲ್ಲಿರುವ ಬಿಜೆಪಿ ಸರಕಾರಕ್ಕೆ ೪೦% ಸರಕಾರ ಎನ್ನುವ ಬಿರುದು ಇದೀಗಾಗಲೇ ಸಿಕ್ಕಿದೆ. ೪೦% ಕಮಿಶನ್ ಗೆ ಇಂದು ಕಡಿವಾಣ ಹಾಕುವ ಕೆಲಸವಾಗಬೇಕು. ಕೋಮು ಭಾವನೆಯನ್ನು ಹುಟ್ಟುಹಾಕಿ ಮತಗಿಟ್ಟಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಸಮಾಜದ ದುರ್ಬಲ ವರ್ಗವನ್ನು ಮೇಲಕ್ಕೆತ್ತುವ ಕೆಲಸ ಬಿಜೆಪಿಯಿಂದ ಆಗಿಲ್ಲ. ಕಾಂಗ್ರೆಸ್ ಸರಕಾರ ಆಡಳಿತದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಬಿಜೆಪಿ ಸರಕಾರ ತೆಗೆದುಹಾಕಿದೆ.
ಕಾಂಗ್ರೆಸ್ ನ ಆಡಳಿತ ಸಂದರ್ಭದಲ್ಲಿ ಹುಟ್ಟು ಹಾಕಿರುವ ಇಂದಿರಾ ಕ್ಯಾಂಟಿನ್ ಅನ್ನು ಮುಚ್ಚುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸವಾಗಿದೆ‌. ಜನಪರ ಕೆಲಸಕ್ಕೆ ಒಲವು ತೋರದ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕಾದ ಅನಿವಾರ್ಯತೆ ಜನತೆಯ ಪಾಲಿಗೆ ಬಂದೊದಗಿದೆ ಎಂದ ಅವರು ಅಶೋಕ್ ರೈ ಸಂಪಾದನೆಯ ಒಂದಂಶವನ್ನು ಬಡವರ್ಗಕ್ಕೆ ನೀಡುವ ಕೆಲಸ ಅವರ ಟ್ರಸ್ಟ್ ನ ಮುಖಾಂತರ ಕೊಡುವ ಕೆಲಸ ಮಾಡುತ್ತಿದ್ದಾರೆ. ಮನುಷ್ಯನಿಗೆ ಶ್ರೀಮಂತಿಕೆಯ ಜೊತೆಗೆ‌ ಹೃದಯ ಶ್ರೀಮಂತಿಕೆ ಬೇಕು. ಅದು ಇರುವ ಮಾನವತಾವಾದಿ ಶ್ರೇಷ್ಟ ಅಭ್ಯರ್ಥಿ ಅಶೋಕ್ ಕುಮಾರ್ ರೈ. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ನ ಗೆಲುವಿಗೆ ಸಹಕರಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆ ಗೆಲುವಾಗುವುದನ್ನು ಯಾವ ಶಕ್ತಿಗಳಿಗೂ ತಡೆಯಲು ಸಾಧ್ಯವಿಲ್ಲ. ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಕರ್ನಾಟಕವಾಗಲಿದೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರರವರು ಮಾತನಾಡಿ ಕಾರ್ಯಕರ್ತರಿಗೆ ಮಣ್ಣನೆ ಸಿಗಬೇಕಾದರೆ ನಮ್ಮ ಕ್ಷೇತ್ರದಲ್ಲಿ ನಮ್ಮ ಶಾಸಕರಿರಬೇಕು. ನಮ್ಮ ಶಾಸಕರ ಗೆಲುವಾದರೆ ಆಗ ನಮ್ಮ ತಳಮಟ್ಟದ ಕಾರ್ಯಕರ್ತನು ನಾಯಕನಾದಂತೆ. ಸಾಮನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ನಮ್ಮ ನಾಯಕನಾಗ ಬೇಕಾಗಿರುವುದು ಬಹಳ ಅನಿವಾರ್ಯ. ಎಲ್ಲರೂ ದೃಡಸಂಕಲ್ಪ ದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಣತೊಡೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿಯಾದ ಮಹೇಶ್ ಅಂಕೊತ್ತಿಮಾರ್, ಹಿರಿಯ ಮುಖಂಡರಾದ ಕೃಷ್ಣರಾವ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಝೀರ್ ಮಠ, ವಿಟ್ಲ-ಉಪ್ಪಿನಂಗಡಿ ಬ್ಲಾಕ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಅಳಕೆಮಜಲ್, ಪಕ್ಷ ಪ್ರಮುಖರಾದ ಹನೀಫ್ ಬಗ್ಗುಮೂಲೆ, ಉಲ್ಲಾಸ್ ಕೋಟ್ಯಾನ್, ಹಸೈನಾರ್ ನೆಲ್ಲಿಗುಡ್ಡೆ, ಬೇಬಿ ಗೌಡ ಸೂರ್ಯ, ಅಶ್ರಫ್ ಬಸ್ತಿಕಾರ್, ವೇದನಾಥ್ ಸುವರ್ಣ, ಹಾಜಿ ಮೊಹಿದ್ದೀನ್ ಶಾಫಿ, ಅಬ್ಬಾಸ್ ಕೋಲ್ಪೆ, ಹಾಜಿ ಅಬ್ದುಲ್ ಖಾದರ್ , ಶೇಕಬ್ಬ ಕೋಲ್ಪೆ, ಹಮೀದ್ ಕನ್ಯಾನ ಕೋಲ್ಪೆ, ವಿ.ಎ. ರಶೀದ್ ವಿಟ್ಲ, ಇಕ್ಬಾಲ್ ಹಾನೆಸ್ಟ್, ಉಮ್ಮರ್ ಶಾಫಿ ಕಲಂದಡ್ಕ, ಮೊಹಮ್ಮದ್ ಖಂದಕ್, ಅಬೂಬಕ್ಕರ್ ಕೋಲ್ಪೆ, ಲಕ್ಷ್ಮಣ ಮಿತ್ತೂರು, ಅಬ್ಬು ನವಗ್ರಾಮ ಮೊದಲಾದವರು ಉಪಸ್ಥಿತರಿದ್ದರು.

ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ನಾಸಿರ್ ಕೋಲ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲತೀಫ್ ದಲ್ಕಾಜೆ ವಂದಿಸಿದರು.