ಡೈಲಿ ವಾರ್ತೆ:29 ಏಪ್ರಿಲ್ 2023

ದಕ್ಷಿಣ ಕನ್ನಡ: ಕಾಲೇಜ್ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ.!(ಆತ್ಮಹತ್ಯೆ ಶಂಕೆ)

ಬೆಳ್ತಂಗಡಿ:ಖಾಸಗಿ ಕಾಲೇಜೊಂದರಲ್ಲಿ ನೀಟ್‌ ಕೋಚಿಂಗ್ ಗೆ ಎಂದು ಬಂದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿಗಳಾದ
ಸನಾವುಲ್ಲಾ ಮತ್ತು ಪರ್ವೀನ್ ದಂಪತಿಯ ಪುತ್ರಿ ಉಮೆ ಉಜ್ಮಾ ಎಸ್‌.(19) ಮೃತಪಟ್ಟ ವಿದ್ಯಾರ್ಥಿನಿ.

ಕುವೆಟ್ಟು ಸಮೀಪದ ಖಾಸಗಿ ಕಾಲೇಜೊಂದರಲ್ಲಿ ಮೆಡಿಕಲ್‌ ಕೋರ್ಸ್‌ ಪ್ರವೇಶಕ್ಕಾಗಿ ಉಜ್ಮಾ ನೀಟ್‌ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಇಲ್ಲಿನ ಕಾಲೇಜು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು.

ನಿನ್ನೆ ಬೆಳಿಗ್ಗೆ ರೂಮಿನಿಂದ ಹೊರಕ್ಕೆ ಹೋದವಳು ಕಟ್ಟಡದಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಕುಟುಂಬ ಸಂಶಯ ವ್ಯಕ್ತಪಡಿಸಿದೆ‌. ಆತ್ಮಹತ್ಯೆಯ ಶಂಕೆ ಕೂಡ ಮೂಡಿದೆ.