ಡೈಲಿ ವಾರ್ತೆ:11 ಮೇ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಖ್ಯಾತ ಉದ್ಯಮಿಯವರ ಮಗ ಹಾಗೂ ಸೊಸೆ ಪವಡಾಸದೃಶ ಪಾರು..!

ಸಾಗರ: ಚುನಾವಣೆಯಲ್ಲಿ ಮತ ಹಾಕಲು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಟೊಯೋಟ ಫಾರ್ಚೂನರ್ ಕಾರು ಚನ್ನಗಿರಿ ಹೆಬ್ಬಲಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚೆನ್ನಗಿರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಗೊಂಡವರನ್ನು ಸಾಗರದ ಖ್ಯಾತ ಉದ್ಯಮಿಗಳಾದ ಹೋಟೆಲ್ ಗ್ರೀನ್ ಎಂಬಾಸ್ಸಿ ಹಾಗೂ SGT ಕಂಪನಿಯ ಮಾಲೀಕರಾದ ಹಾಜಿ ಸಯ್ಯದ್ ಇಕ್ಬಾಲ್ ಸಾಹೇಬರ ಮಕ್ಕಳಾದ ಸೈಯದ್ ಝಹೂರ್.ಸೈಯದ್ ನಯಾಝ್. ಮತ್ತು ನಯಾಝ್‌ರ ಪತ್ನಿ ಸುನೈನಾ ಎಂದು ತಿಳಿದು ಬಂದಿದೆ.



ಚೆನ್ನಗಿರಿ ತಾಲೂಕಿನ ಹೆಬ್ಬಲಗೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಈ ಘಟನೆ ನಡೆದಿದ್ದು, ಮಳೆ ಬರುತ್ತಿದ್ದ ಸಮಯದಲ್ಲಿ ಚಾಲಕ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಹತ್ತು ಅಡಿಗಳಷ್ಟು ದೂರಕ್ಕೆ ಎಳೆದು ಪಲ್ಟಿಯಾಗಿ ಹದಿನೈದು ಅಡಿಗಳಷ್ಟು ಎತ್ತರಕ್ಕೆ ಹಾರಿ ಮೇಲಿನ ವಿಧ್ಯುತ್ ತಂತಿಗೆ ತಾಗಿ ರಸ್ತೆ ವಿಭಜಕಕ್ಕೆ ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಇದೆ ಸ್ಥಳದಲ್ಲಿ ಕೆಲವು ದಿನಗಳ ಹಿಂದೆ ನಾಲ್ಕೈದು ಅಪಘಾತಗಳಾಗಿದೆ. ಈ ವರ್ಷದಲ್ಲೇ ಈ ಸ್ಥಳದಲ್ಲಿ ಸುಮಾರು ಸಾವುಗಳಾಗಿದೆ.ಅಂಥದರಲ್ಲಿ ಇವರೆಲ್ಲ ಬದುಕುಳಿದಿದ್ದೇ ಹೆಚ್ಚು ಎಂದು ಹೇಳಿದ್ದಾರೆ

ಘಟನೆಗೆ ಸಂಬಂದಿಸಿದಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ.