ಡೈಲಿ ವಾರ್ತೆ:17 ಮೇ 2023

ಉಡುಪಿ ಗಿರಿಜಾ ಹೆಲ್ತ್‌ ಕೇರ್‌ & ಸರ್ಜಿಕಲ್ಸ್ ಹಾಗೂ ಎಸ್‌ಸಿಐ ಉಡುಪಿ ಟೆಂಪಲ್ ಸಿಟಿವತಿಯಿಂದ ದಾದಿಯರ ದಿನಾಚರಣೆ

ಉಡುಪಿ: ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಮತ್ತು ಎಸ್‌ಸಿಐ ಉಡುಪಿ ಟೆಂಪಲ್ ಸಿಟಿ ವತಿಯಿಂದ ಇತ್ತೀಚಿಗೆ ಗಿರಿಜಾ ಹೆಲ್ತ್‌ ಕೇರ್ ಅಂಡ್ ಸರ್ಜಿಕಲ್ಸ್ ನ ಉಡುಪಿ ಶಾಖೆಯಲ್ಲಿ ದಾದಿಯರ ದಿನಾಚರಣೆ ಯನ್ನು ಆಚರಿಸಲಾಯಿತು.



ಉಡುಪಿ ಸುತ್ತ ಮುತ್ತಲಿನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತಿರುವ ನರ್ಸಿಂಗ್ ಸುಪೆರಿಂಟೆಂಡೆಂಟ್ಸ್ ಮತ್ತು ಹಿರಿಯ ದಾದಿಯರನ್ನು ಅವರು ತಮ್ಮ ಕ್ಷೇತ್ರದಲ್ಲಿ ಮಾಡುತಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಣಿಪಾಲದ ಕೆಎಂಸಿಯ ಸೈಕಾಟ್ರಿ ವಿಭಾಗದ ಪ್ರೊ. ಡಾ.ಶ್ರೀಪತಿ ಎಂ ಭಟ್ ಮತ್ತು ಕೋರ್ಟ್ ಹಿಂಬದಿ ರಸ್ತೆಯಲ್ಲಿ ಇರುವ ಮೆಡಿಕಲ್ ಸೆಂಟರ್‌ನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ರಂಜಿತ್ ನಾಯಕ್, ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಸಂಸ್ಥೆಯ ಪ್ರವರ್ತಕರಾದ ರವೀಂದ್ರ ಶೆಟ್ಟಿ, ಎಸ್‌ಸಿಐ ಉಡುಪಿ ಟೆಂಪಲ್ ಸಿಟಿ ಸಂಸ್ಥೆಯ ಅಧ್ಯಕ್ಷ ಅಲ್ವಿನ್ ಮೆನೆಜಸ್, ಕಾರ್ಯದರ್ಶಿ ಟಿ.ಆರ್ ದೊಡ್ಡಮನಿ, ಪೂರ್ವಾಧ್ಯಕ್ಷ ಸುಕುಮಾರ ಅವರು ಹಾಗೂ ಸುಮಾರು 45 ರಿಂದ 50
ದಾದಿಯರು ಉಪಸ್ಥಿತರಿದ್ದರು.

ಇನ್ನು ಅದೇ ದಿನ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ ಮಂಗಳೂರು ಮತ್ತು ಕುಂದಾಪುರ ಶಾಖೆ ಗಳಲ್ಲಿ ಕೂಡಾ ಆ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರುನ್ನು ಅವರ ಕಾರ್ಯ ಸ್ಥಳಕ್ಕೆ ಭೇಟಿ ಕೊಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.