ಡೈಲಿ ವಾರ್ತೆ: 19 ಮೇ 2023

ವರದಿ: ವಿದ್ಯಾಧರ ಮೊರಬಾ

ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಹರಿದು ಪರಾರಿಯಾಗಲು ಯತ್ನ: ಸ್ಥಳೀಯರ ಸಹಾಯದಿಂದ ಆರೋಪಿ ಯಶವಂತ ನಾಯ್ಕ ಬಂಧನ!

ಅಂಕೋಲಾ : ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬನು ವಿಳಾಸ ಕೇಳುವ ನೆಪದಲ್ಲಿ ವಿಳಾಸದ ಚೀಟಿ ತೋರಿಸಿ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ ಮಾಂಗಲ್ಯ ಸರ ಹರಿದು ಪರಾರಿಯಾಗಿದ್ದು, ಆತನನ್ನು ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಹಟ್ಟಿಕೇರಿ ಯಲ್ಲಾಮ್ಮ ಕ್ರಾಸ್ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಕುಮಟಾ ತಾಲೂಕಿನ ನಾಗರು ಗ್ರಾಮದ ಯಶವಂತ ನ್ಯಾಮ ನಾಯ್ಕ (28) ಎಂಬಾತನೇ ಆರೋಪಿ. ಈತನು ಹಟ್ಟಿಕೇರಿ ಯಲ್ಲಾಮ್ಮ ಕ್ರಾಸ್ ಬಳಿ ವೇದಾ ಮಂಜುನಾಥ ನಾಯ್ಕ ಇವರ ಹತ್ತಿರ ತನ್ನ ಕೈಲಿರುವ ಚೀಟಿಯೊಂದನ್ನು ತೋರಿಸಿ, ಅದರಲ್ಲಿ ಏನು ಬರೆದಿದೆ ಎಂದು ಓದಿ ಹೇಳುವಂತೆ ತಿಳಿಸಿ, ಅವಳ ಲಕ್ಷ್ಯ ವನ್ನು ಚೀಟಿಯತ್ತ ಸೆಳೆದು ಕುತ್ತಿಗೆಯಲ್ಲಿದ ಮಾಂಗಲ್ಯ ಸರಕ್ಕೆ ಕೈಹಾಕಿ ಎಗರಿಸಿಕೊಂಡು ಹೋಗಿದ್ದಾನೆ.
ಆರೋಪಿ ಅವರ್ಸಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸುಮಾರು 40 ಸಾವಿರ ಮೌಲ್ಯದ ಮಾಂಗಲ್ಯ ಸರದ ತುಂಡನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ. ಪಿಐ ಜೆ. ಆರ್. ಡಿಸೋಜಾ ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.