ಡೈಲಿ ವಾರ್ತೆ: 30 ಮೇ 2023

ದಕ್ಷಿಣ ಕನ್ನಡ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!

ಬಂಟ್ವಾಳ : ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ನರಿಕೊಂಬುವಿನಲ್ಲಿ ಪತ್ತೆಯಾಗಿದೆ.

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಗುಡ್ಡವೊಂದರಲ್ಲಿ ಸುಮಾರು 40 ರಿಂದ 50 ವಯಸ್ಸಿನ ಗಂಡಸಿನ ಮೃತದೇಹ ಪತ್ತೆಯಾಗಿದ್ದು
ಸ್ಥಳೀಯರು ಪಕ್ಕದ ತೋಟಕ್ಕೆ ನೀರು ಬಿಡಲು ಹೋದ ವೇಳೆ ಗುಡ್ಡೆಯಲ್ಲಿ ವಾಸನೆ ಬರುತ್ತಿತ್ತು. ಸಮೀಪ ಹೋಗಿ ನೋಡಿದಾಗ ಮರದಲ್ಲಿ ಮೃತದೇಹ ನೇತಾಡುತ್ತಿರುವುದು ಗಮನಕ್ಕೆ ಬಂದಿದೆ.

ಆತ್ಮಹತ್ಯೆ ಗೈದು ಸುಮಾರು 10 ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.