ಡೈಲಿ ವಾರ್ತೆ:23 ಜೂನ್ 2023

ಕುಂದಾಪುರ ಗೋಲ್ಡ್ ಜ್ಯುವೆಲ್ಲರ್ಸ್ ಸಂಸ್ಥೆಯಿಂದ ವಂಚನೆಗೊಳಗಾದ ಗ್ರಾಹಕರು ಶೀಘ್ರನ್ಯಾಯಕ್ಕಾಗಿ ಕರ್ನಾಟಕ ಸರಕಾರದ ಮಾನ್ಯ ಸಭಾಪತಿಗಳಾದ ಯು.ಟಿ.ಖಾದರ್ ರವರಿಗೆ ಮನವಿ

ಕುಂದಾಪುರ : ಗೋಲ್ಡ್ ಜ್ಯುವೆಲ್ಲರ್ಸ್ ಸಂಸ್ಥೆಯಿಂದ ವಂಚನೆಗೊಳಗಾದ ಗ್ರಾಹಕರು ಶೀಘ್ರನ್ಯಾಯಕ್ಕಾಗಿ ಕರ್ನಾಟಕ ಸರಕಾರದ ಮಾನ್ಯ ಸಭಾಪತಿಗಳಾದ ಯು.ಟಿ.ಖಾದರ್ ರವರಿಗೆ ಜೂ. 23 ರಂದು ಶುಕ್ರವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಸುಮಾರು ಎರಡು ವರ್ಷದ ಹಿಂದೆ ಬಡ್ಸ್ act ನಲ್ಲಿ ನೊಂದಾಯಿಸ್ಪಟ್ಟ ಈ ಕೇಸು, ಮಂದಗತಿಯಲ್ಲಿ ಸಾಗುತ್ತಿದ್ದು ಇಲಾಖಾ ಮಟ್ಟದಲ್ಲಿಯೇ ಇರುವುದನ್ನು ಮನಗಂಡ ನೊಂದ ಗ್ರಾಹಕರು ಸನ್ಮಾನ್ಯ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಅವರಿಗೆ ಶೀಘ್ರ ನ್ಯಾಯಕ್ಕಾಗಿ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂಡ್ಲೂರು, ಬಸ್ರೂರು, ಶೀರೂರು, ಕುಂದಾಪುರದಿಂದ ಬಂದಂತಹ ಸುಮಾರು 40 ಮಂದಿ ಉಪಸ್ಥಿತರಿದ್ದರು.

“ಸುಮಾರು 9 ಕೋಟಿ ವಂಚನೆಯ ಈ ಕೇಸು ಸುದ್ದಿ ಮಾಡಲೇ ಇಲ್ಲ. ಆದರೂ ಪಟ್ಟು ಬಿಡದೇ ಜನರು ಇದರ ಹಿಂದೆ ಬಿದ್ದ ಪರಿಣಾಮ ಕೇಸು ಮುಂದುವರೆಯುತ್ತಿದೆ ಅನ್ನೋದು ನೊಂದ ಗ್ರಾಹಕರ ಮಾತು”