ಡೈಲಿ ವಾರ್ತೆ: 25 ಜೂನ್ 2023

ಆಹಾರಕ್ಕಾಗಿ ಲಾರಿ ಟಾರ್ಪಲ್ ಕಿತ್ತು ಚೆಕ್ಕಿಂಗ್ ಮಾಡಿದ ಒಂಟಿಸಲಗ!

ಚಾಮರಾಜನಗರ: ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗ ಚೆಕ್ಕಿಂಗ್ ಮಾಡಿದ ಪ್ರಸಂಗವೊಂದು ಚಾಮರಾಜನಗರ ಜಿಲ್ಲೆಯ ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ವಸೂಲಿಗೆ ಇಳಿದಿದೆ. ಲೋಡ್ ಲಾರಿಗಳನ್ನ ಅಡ್ಡಗಟ್ಟಿದ ಕಾಡಾನೆ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲ ವಾಹನಗಳನ್ನು ತಡೆದು ಟ್ರಾಫಿಕ್ ಜಾಮ್ ಉಂಟಾಗಿದೆ.

ಮೊದಲು ಕಬ್ಬಿನ ಲಾರಿಗಳನ್ನು ಅಡ್ಡಗಟ್ಟುತ್ತಿದ್ದ ಕಾಡಾನೆ, ಇದೀಗ ತರಕಾರಿ ಲಾರಿಗಳು ಹಾಗೂ ಇತರೆ ವಾಹನಗಳನ್ನು ಅಡ್ಡಗಟ್ಟುತ್ತಿದೆ. ಲಾರಿಗಳ ಟಾರ್ಪಾಲ್ ಕೀಳಲು ಸತತ ಪ್ರಯತ್ನ ಮಾಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.