ಡೈಲಿ ವಾರ್ತೆ:25 ಜೂನ್ 2023

ಕೋಟ‌: ಗದ್ದೆ ಅಂಚಿನ ಸಮಸ್ಯೆ – ತಡೆಗೋಡೆ ದ್ವಂಸ, ಜೀವ ಬೆದರಿಕೆ, ಕಲ್ಲು ಹೊತ್ತೊಯ್ದ ಆರೋಪಿಗಳು !

ಕೋಟ: ಗದ್ದೆ ಅಂಚಿನಲ್ಲಿ‌ ಕಿರಿದಾದ ದಾರಿಗೆ ಕಟ್ಟಿದ ತಡೆಗೋಡೆ ಒಡೆದು ಹಾಕಿ ಶಿಲೆಕಲ್ಲುಗಳನ್ನು ತೆಗೆದು ಕೊಂಡು ಹೋಗಿ ಜೀವ ಬೆದರಿಕೆ‌ ಒಡ್ಡಿದ ಘಟನೆ‌ ಕೋಟ ಮಣೂರು ಕಂಬಳಗದ್ದೆ ಬಳಿ ನಡೆದಿದೆ.

ಬಾಳೆಬೆಟ್ಟಿನ‌ ಕೃಷ್ಣ ಪೂಜಾರಿ‌ ಅವರು ಪಂಚಾಯಿತಿಯ ಅನುಮತಿ‌ ಪಡೆದು ಮಳೆ‌ ನೀರಿಗೆ ಕೊಚ್ಚಿ ಹೋಗುತ್ತಿದ್ದ ಗದ್ದೆ ಅಂಚಿಗೆ ಶಿಲೆಕಲ್ಲುಗಳ‌ನ್ನು ಹಾಕಿ ಕಾಲ್ನಡಿಗೆಗೆ ಅವಕಾಶ ಕಲ್ಪಿಸಿದ್ದರು.
ಆದರೆ ಭಾನುವಾರ ಕಂಬಳ ಗದ್ದೆ ನಿವಾಸಿಗಳಾದ ರಾಜೇಶ್,‌ ಪ್ರಕಾಶ್, ಅರವಿಂದ, ಅಕ್ಷಯ,‌ಅವಿನಾಶ್ ಮತ್ತು ದಿನೇಶ್ ಎನ್ನುವವರು ಏಕಾಏಕಿ ಕೃಷ್ಣ ಪೂಜಾರಿ ಅವರು ಹಾಕಿದ 500ಕ್ಕೂ ಹೆಚ್ಚು ಶಿಲೆಕಲ್ಲುಗಳನ್ನು ಕಿತ್ತುಕೊಂಡು ಹೋಗಿ ಕುಟುಂಬದ‌ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಕೃಷ್ಣ ಅವರು ಪ್ರಕರಣ ದಾಖಲಿಸಿದ್ದಾರೆ.