ಡೈಲಿ ವಾರ್ತೆ: 24 ಜುಲೈ 2023

ಚಿಕ್ಕಮಗಳೂರು:ಮಳೆಯ ಆರ್ಭಟಕ್ಕೆ ಒಂದೇ ಸ್ಥಳದಲ್ಲಿ ಎರಡು ವಾಹನಗಳು ಪಲ್ಟಿ

ಮೂಡಿಗೆರೆ: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟಕ್ಕೆ ಚಾಲಕನ ನಿಯಂತ್ರಣ ತಪ್ಪಿ ಎರಡು ವಾಹನಗಳು ಒಂದೇ ಸ್ಥಳದಲ್ಲಿ ಪಲ್ಟಿಯಾಗಿದೆ.
ಬಣಕಲ್ ಸಮೀಪ ಹೇಮಾವತಿ ನದಿಗೆ ಶಿಫ್ಟ್ ಕಾರ್ ಮತ್ತೊಂದು ಇನೋವಾ ಕಾರ್ ಪಲ್ಟಿಯಾಗಿದೆ.

ಇನೋವಾ ಕಾರಿನ ಪ್ರಯಾಣಿಕರು ಪುತ್ತೂರಿನಿಂದ ಚಿಕ್ಕಮಗಳೂರು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.